Advertisement

Delhi; 3ನೇ ಸಮನ್ಸ್‌ಗೂ ಡೋಂಟ್‌ಕೇರ್‌: ಇ.ಡಿ. ವಿಚಾರಣೆಗೆ ಕೇಜ್ರಿ ಚಕ್ಕರ್‌

11:24 PM Jan 03, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ 3ನೇ ಬಾರಿ ಕೂಡ ಜಾರಿ ನಿರ್ದೇಶನಾಲಯ(ಇಡಿ)ದ ಸಮನ್ಸ್‌ಗೆ ದಿಲ್ಲಿ ಸಿಎಂ ಕೇಜ್ರಿವಾಲ್‌ ಡೋಂಟ್‌ ಕೇರ್‌ ಎಂದಿದ್ದಾರೆ. “ರಾಜ್ಯಸಭೆ ಚುನಾವಣೆ, ಗಣರಾಜ್ಯೋತ್ಸವ ಸಿದ್ಧತೆಯಲ್ಲಿ ಬ್ಯುಸಿ ಆಗಿರುವ ಕಾರಣ ವಿಚಾರಣೆಗೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ.

Advertisement

ನೀವು ಪ್ರಶ್ನೆಗಳನ್ನು ಕಳುಹಿಸಿ. ಉತ್ತರಿಸಲು ನಾನು ಸಿದ್ಧ­ವಿದ್ದೇನೆ’ ಎಂದು ಕೇಜ್ರಿವಾಲ್‌ ಇಡಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ, “ಹಗರಣದ ಸೂತ್ರಧಾರ ಅವರೇ ಆಗಿರುವ ಕಾರಣ ಕೇಜ್ರಿವಾಲ್‌ ಭಯದಿಂದ ನಡುಗುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದರೆ, “ಕೇಜ್ರಿವಾಲ್‌ರನ್ನು ಬಂಧಿಸಲು ಸಂಚು ನಡೆದಿದೆ’ ಎಂದು ಆಪ್‌ ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next