Advertisement

ಕನ್ನಡಿಗರನ್ನು ಕೆರಳಿಸಬೇಡಿ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

11:27 PM Nov 01, 2023 | Team Udayavani |

ವಿಜಯಪುರ: ಮಹಾರಾಷ್ಟ್ರದಲ್ಲಿ ಮರಾಠಿ ಮೀಸಲು ಹೋರಾಟದ ನೆಪದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿದೆ. ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಎಚ್ಚರಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದ ಬಸ್‌ಗಳಿಗೆ ಬೆಂಕಿ ಹಚ್ಚಿರುವ ಕೃತ್ಯ ಖಂಡನಾರ್ಹ. ಮರಾಠಿ ಮೀಸಲಾತಿಗೆ ಹೋರಾಟ ಮಾಡಬೇಕೆ ಹೊರತು ಕರ್ನಾಟಕದ ಬಸ್‌ಗಳಿಗೆ ಬೆಂಕಿ ಹಚ್ಚುವ ಕೆಲಸ ತರವಲ್ಲ. ಮಹಾರಾಷ್ಟ್ರದ ಮರಾಠ ಮೀಸಲು ಹೋರಾಟ ಮಹಾರಾಷ್ಟ್ರ ಸರಕಾರದ ವಿರುದ್ಧ ಇರಬೇಕೇ ಹೊರತು ಕರ್ನಾಟಕ ರಾಜ್ಯದ ಆಸ್ತಿಗೆ ಹಾನಿ ಮಾಡುವ ಹಾಗೂ ಕನ್ನಡಿಗರ ಮೇಲೆ ಹರಿಹಾಯುವುದಲ್ಲ. ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಕೌಟುಂಬಿಕ ಬಾಂಧವ್ಯಗಳಿವೆ, ಕರ್ನಾಟಕದ ಜನರು ವೈದ್ಯಕೀಯ ಸೇವೆಗಾಗಿ ಮಹಾರಾಷ್ಟ್ರದ ಹಲವು ನಗರಗಳಿಗೆ ಹೋಗುತ್ತಾರೆ. ಮರಾಠಿ ಮೀಸಲು ಹೋರಾಟದ ನೆಪದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದರೆ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next