Advertisement

ಉದರದಲ್ಲೇ ಕತ್ತರಿ ಬಿಟ್ಟರು

12:30 AM Feb 10, 2019 | Team Udayavani |

ಹೈದರಾಬಾದ್‌: ಮೂರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯ ಹೊಟ್ಟೆಯಿಂದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಬಳಸುವ ಕತ್ತರಿಯನ್ನು ಹೊರತೆಗೆದಿದ್ದಾರೆ. ಮಹೇಶ್ವರಿ ಚೌಧರಿ ಎಂಬ ಮಹಿಳೆ 3 ತಿಂಗಳ ಹಿಂದೆ ಇಲ್ಲಿನ ಪ್ರಸಿದ್ಧ ಸರ್ಕಾರಿ ಆಸ್ಪತ್ರೆ ನಿಜಾಮ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌(ನಿಮ್ಸ್‌)ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಚ್ಚರಿಯೆಂಬಂತೆ, ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟಿದ್ದರು. ಮೂರು ತಿಂಗಳ ಕಾಲ ನೋವು ಅನುಭವಿಸಿ, ಕೊನೆಗೆ ಆಸ್ಪತ್ರೆಗೆ ಮರಳಿದ ಅವರು ಎಕ್ಸ್‌-ರೇ ಮಾಡಿಸಿಕೊಂ ಡಾಗ ಕತ್ತರಿ ಇರುವುದು ಪತ್ತೆಯಾಯಿತು. ಈಗ ಅವರಿಗೆ ಮತ್ತೂಂದು ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಯನ್ನು ಹೊರತೆಗೆಯ ಲಾಯಿತು. ಕತ್ತರಿ ಉಳಿಸಿದ್ದ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next