Advertisement

ಕ್ಲಿನಿಕ್ ಬಾಗಿಲು ತಡವಾಗಿ ತೆರೆದರೆಂದು ವೈದ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಗುಂಪು

12:24 PM Sep 11, 2022 | Team Udayavani |

ಮಹಾರಾಷ್ಟ್ರ : ಕ್ಲಿನಿಕ್ ಬಾಗಿಲು ತಡವಾಗಿ ತೆರೆದರೆಂದು ಹೊರಗಡೆ ವೈದ್ಯರಿಗಾಗಿ ಕಾದು ಕುಳಿತ ತಂಡವೊಂದು ಸಿಟ್ಟಿಗೆದ್ದು ವೈದ್ಯ ಮತ್ತು ಅವರ ಮಗನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

Advertisement

ಸೆಪ್ಟೆಂಬರ್ 6 ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ಈ ಘಟನೆ ನಡೆದಿದ್ದು ಬಾರಾಮತಿಯಲ್ಲಿರುವ ಆಯುರ್ವೇದ ವೈದ್ಯರೊಬ್ಬರು ತನ್ನ ಮನೆಯಲ್ಲೇ ಕ್ಲಿನಿಕ್ ನಡೆಸುತ್ತಿದ್ದು ಸೆಪ್ಟೆಂಬರ್ 6 ರಂದು ರಾತ್ರಿ ಕ್ಲಿನಿಕ್ ಬಂದ್ ಮಾಡಿ ಕುಟುಂಬದವರೊಂದಿಗೆ ಊಟ ಮಾಡುತ್ತಿರುವ ವೇಳೆ ಬಾಗಿಲು ಬಡಿದಿದ್ದಾರೆ ಈ ವೇಳೆ ಮನೆ ಮಂದಿ ಊಟ ಮಾಡುತ್ತಿದ್ದ ಕಾರಣ ಬಾಗಿಲು ತೆರೆಯಲು ತಡವಾಗಿದೆ ಇದರಿಂದ ಕೋಪಗೊಂಡ ಗುಂಪೊಂದು ಮನೆಯ ಕಿಟಕಿಯ ಗಾಜುಗಳನ್ನು ಪುಡಿಗೈದಿದ್ದಾರೆ ಈ ವೇಳೆ ಎದ್ದು ಬಂದ ವೈದ್ಯರು ಬಾಗಿಲು ತೆರೆದಾಗ ಮೂರು ನಾಲ್ಕು ಮಂದಿ ಒಳ ಪ್ರವೇಶಿಸಿ ವೈದ್ಯರು ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.

ಡಾ. ಗುರುರಾಜ್ ಗಾಯಕ್ವಾಡ್ ಅವರ ಕ್ಲಿನಿಕ್ ನಲ್ಲಿ ನಡೆದ ಘಟನೆ ಅವರ ಕ್ಲಿನಿಕ್ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಗೆ ಸಂಬಂಧಿಸಿ ಮಾಲೆಗಾಂವ್ ಪೊಲೀಸರು ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಲಕ್ನೋ ಹೋಟೆಲ್ ನಲ್ಲಿ ಅಗ್ನಿ ಅವಘಡ ಪ್ರಕರಣ : 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next