Advertisement

ದೇವೇಗೌಡ್ರಿಂದ ಕೆಲಸ ಆಗೊಲ್ಲವೇ?

06:15 AM Feb 08, 2018 | Team Udayavani |

ವಿಧಾನಸಭೆ: ಏನ್‌ ಶಿವಲಿಂಗೇಗೌಡ್ರೇ ಹೀಗಂತೀರಾ. ಪ್ರಧಾನಿ ನರೇಂದ್ರ ಮೋದಿಯವರೇ ನಿಮ್‌ ದೇವೇಗೌಡ್ರನ್ನು ಪಕ್ಕದಲ್ಲೇ ಕೂರಿಸ್ಕೊಂಡು ಮಾತಾಡ್ತಾರೆ. ಅಂಥವ್ರಿಗೆ ಶರಾವತಿ ನದಿಯಿಂದ ಅರಸೀಕೆರೆಗೆ ನೀರು ಕೊಂಡೊಯ್ಯೋಕೆ ಆಗೋಲ್ವೇ?
ಜೆಡಿಎಸ್‌ ಸದಸ್ಯ ಶಿವಲಿಂಗೇಗೌಡ ಕುರಿತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ ಈ ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿತು.

Advertisement

ಅರಸೀಕೆರೆ ತಾಲೂಕಿನಲ್ಲಿ ಮಳೆ ಕೊರತೆ ಇದೆ. ಅಂತರ್ಜಲ ಇಲ್ಲದೆ ತಾಲೂಕಿನಲ್ಲಿ ಬೆಳೆ ಒಣಗುತ್ತಿದೆ ಎಂದು ಶಿವಲಿಂಗೇಗೌಡ ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಕೆ.ಎನ್‌.ರಾಜಣ್ಣ, ಎತ್ತಿನಹೊಳೆ ಯೋಜನೆಯಲ್ಲಿ ಅರಸೀಕೆರೆ ತಾಲೂಕಿನ ಪ್ರಸ್ತಾಪವೇ ಇಲ್ಲದಿದ್ದರೂ ನೀವು ಮುಖ್ಯಮಂತ್ರಿಗಳನ್ನು ಮಾತಾಡಿ ನೀರು ತರಿಸ್ಕೊಂಡಿಲಲ್ವೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಿವಲಿಂಗೇಗೌಡ, ಹೌದು ಆದರೆ, ಯೋಜನೆ ಈಗ ಸಾಗುತ್ತಿರುವ ವೇಗ ನೋಡಿದ್ರೆ ಅದು ಮುಗಿಯೋದು ಇನ್ನೂ ಹತ್ತಾರು ವರ್ಷ ಆಗಬಹುದು ಎಂದಾಗ, ಎತ್ತಿನಹೊಳೆ ಯೋಜನೆ ಮೂಲಕ ನೇತ್ರಾವತಿ ನೀರು ತಗೊಂಡ್ರೆ ಆ ಭಾಗದವರು (ಕರಾವಳಿ) ನಮ್ಮಲ್ಲಿ ಮೀನುಗಾರಿಕೆ ನಾಶವಾಗುತ್ತದೆ ಎನ್ನುತ್ತಾರೆ. ಅದ್ಕೆ ಒಂದು ಕೆಲ್ಸ ಮಾಡಿ. ಶರಾವತಿ ನದಿಯಿಂದ ಪೈಪ್‌ ಹಾಕಿ ನೀರು ತಗೊಂಡೋಗಿ. ಯಾರೂ ಅಡ್ಡ ಬರೋಲ್ಲ ಎಂದು ಸಲಹೆ ನೀಡಿದರು.

ಈ ಕೆಲಸ ಸರ್ಕಾರ ಮಾಡಬೇಕು. ನಾನು ಹೇಗೆ ಪೈಪ್‌ ಹಾಕಿ ನೀರು ತಗೊಂಡೋಗ್ಲಿ ಎಂದು ಶಿವಲಿಂಗೇಗೌಡ ಪ್ರಶ್ನಿಸಿದಾಗ, ನಿಮ್‌ ನಾಯಕ ದೇವೇಗೌಡ್ರಿಗೆ ಹೇಳಿ. ಪ್ರಧಾನಿಯವರೇ ಅವರನ್ನು ತಮ್ಮ ಪಕ್ಕ ಕೂರಿಸ್ಕೊಂಡು ಮಾತಾಡ್ತಾರೆ. ದೇವೇಗೌಡ್ರು ಹೇಳಿದ್ರೆ ಪ್ರಧಾನಿ ಇಲ್ಲಾ ಅಂತಾರೆಯೇ ಎಂದು ಮರುಪ್ರಶ್ನೆ ಹಾಕಿದರು.

ದೇವೇಗೌಡ್ರು ಮಾಜಿ ಪ್ರಧಾನಿ ಅಂತ ಗೌರವ ಕೊಟ್ಟು ಪ್ರಧಾನಿ ಮಾತಾಡ್ತಾರೆ. ಹಾಗೆಂದು ಹೇಳಿದ ಕೆಲ್ಸ ಎಲ್ಲಾ ಮಾಡ್ತಾರೆಯೇ ಎಂದು ಶಿವಲಿಂಗೇಗೌಡ ಕೇಳಿದರಲ್ಲದೆ, ಮುಂದೆ ಜೆಡಿಎಸ್‌ ಸರ್ಕಾರ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಈ ಕೆಲ್ಸ ಮಾಡಿಸ್ಕೋತೀನಿ ಎಂದರು.

Advertisement

ಈ ವೇಳೆ ಅಧಿಕಾರಕ್ಕೆ ಬಂದೇ ಬರ್ತೀವಿ ಅಂತ ಬಿಜೆಪಿ ಜತೆ ಹೋಗೋಕೆ ಹೊರಟಿದ್ದೀರಾ ಎಂದು ಕಾಂಗ್ರೆಸ್‌ ಸದಸ್ಯರು ಕಾಲೆಳೆದಾಗ, ಬಿಜೆಪಿಯವರು ಈಗ್ಲೆà 150 ತಗೊಂಡಿದಾರೆ. ಅವರಿಗೆ ನಮ್ಮ ಅಗತ್ಯ ಏಕೆ? ನಾವೇ ಅಧಿಕಾರಕ್ಕೆ ಬರ್ತೀವಿ. ಬರ್ಕೊಳ್ಳಿ ಎಂದು ಹೇಳಿ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next