Advertisement

ಆಹಾರ ಪದಾರ್ಥಗಳನ್ನು ಕಳುಹಿಸಬೇಡಿ: ಜಿಲ್ಲಾಡಳಿತ

06:50 AM Aug 20, 2018 | Team Udayavani |

ಮಡಿಕೇರಿ: ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಈ ರೀತಿ ಬರುತ್ತಿರುವ ವಸ್ತುಗಳಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡುವುದು ಕಷ್ಟವಾಗಿದೆ. 

Advertisement

ಹೀಗಾಗಿ, ದಾನಿಗಳು, ಸಂಘ ಸಂಸ್ಥೆಗಳು ಸೀಮಿತ ಅವಧಿಯೊಳಗೆ ಬಳಕೆ ಮಾಡಿಕೊಳ್ಳಬಹುದಾದ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ತಯಾರಿಸಿದ ಆಹಾರ ಪದಾರ್ಥಗಳನ್ನು ಸದ್ಯದ ಮಟ್ಟಿಗೆ ಕಳುಹಿಸಿಕೊಡದಿರುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ನೆರವಿನ ಕುರಿತ ಮಾಹಿತಿಗಾಗಿ 8105204059 (ಬಸವರಾಜು), 9972995353(ಶ್ರೀಶ) ಹಾಗೂ 9008167912(ಮಲ್ಲೇಶ) ಅವರುಗಳನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಿ.ಎಲ್‌ ಪ್ರವೀಣ್‌ಕುಮಾರ್‌ ತಿಳಿಸಿದ್ದಾರೆ. ಜತೆಗೆ, ಸಿಎಂ ಪರಿಹಾರ ನಿಧಿಗೆ ಹಣ ಜಮಾ ಮಾಡುವಂತೆಯೂ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next