Advertisement

ಪೋಷಕರ ಮೇಲೆ ಯಾವುದೇ ಒತ್ತಡ ಹೇರದಿರಿ 

11:35 PM Jun 10, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಶಾಲಾ/ಕಾಲೇಜು ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

ಜಿಲ್ಲೆಯ ಖಾಸಗಿ ಶಾಲಾ/ಕಾಲೇಜು ಗಳು ಪೋಷಕರಿಗೆ ಕರೆ ಮಾಡಿ ಬಾಕಿ ಶುಲ್ಕವನ್ನು ಒಂದೇ ಕಂತಿನಲ್ಲಿ ಪಾವತಿಸುವಂತೆ ಆಗ್ರಹಿಸುತ್ತಿರುವುದಾ ಗಿಯೂ, ಶುಲ್ಕ ಪಾವತಿಸದ ವಿದ್ಯಾರ್ಥಿ ಗಳಿಗೆ ಆನ್‌ಲೈನ್‌ ಕ್ಲಾಸ್‌ ತಡೆಹಿಡಿಯು ವುದಾಗಿಯೂ, ಪೋಷಕರು ವರ್ಗಾ ವಣೆ ಪತ್ರಕ್ಕೆ ಮನವಿ ಸಲ್ಲಿಸಿದಾದ ನೀಡದೇ ಇರುವ ಬಗ್ಗೆ, ಶಾಲೆಗೆ ಕರೆಸಿ ಲೇಖನ ಸಾಮಗ್ರಿಗಳನ್ನು ನಿರ್ದಿಷ್ಟ ಅಂಗಡಿಗಳಿಂದ ಖರೀದಿಸೈವಂತೆ ಒತ್ತಾಯಿ ಸುತ್ತಿರುವುದಾಗಿ ಹಲವು ಪೋಷಕರು ದೂರು ನೀಡು ತ್ತಿದ್ದಾರೆ. ರಾಜ್ಯಾದ್ಯಂತ ಶಾಲೆ, ಕಾಲೇಜುಗಳು ತೆರೆಯುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಆದೇಶಿಸಿದ್ದರೂ ಖಾಸಗಿ ಶಾಲಾ/ಕಾಲೇಜಿನ ವರು ಶಾಲೆಗೆ ಬರಲು ತಿಳಿಸುತ್ತಿರುವು ದಾಗಿ ಮಕ್ಕಳ ಪೋಷಕರು ಜಿಲ್ಲಾಡ ಳಿತದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಎಲ್ಲ ಖಾಸಗಿ ಶಾಲಾ/ಕಾಲೇಜು ಗಳ ಮುಖ್ಯಸ್ಥರು ಮಕ್ಕಳ ಪೋಷಕರಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರಬಾರದು. ಈ ಪ್ರಕಟನೆಯ ಅನಂತರವೂ ಇಂತಹ ದೂರು ಬಂದಲ್ಲಿ ಶಿಕ್ಷಣ ಸಂಸ್ಥೆಯ ಮೇಲೆ ಶಿಕ್ಷಣ ಕಾಯ್ದೆಯ ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ದೂರುಗಳೇನಾದರೂ ಇದ್ದಲ್ಲಿ ಪೋಷಕರು ಉಪನಿರ್ದೇಶಕರು (ಆಡಳಿತ) ಸಾ.ಶಿ. ಇಲಾಖೆ ddpi.edu.karmng@nic.in ಅಥವಾ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ddss.pue@gmail.com   ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next