Advertisement

ನೋಟು ನುಂಗಿದ್ದು ಖಾತ್ರಿಯಾಯ್ತು

06:00 AM Jul 01, 2018 | |

ಅಹಮದಾಬಾದ್‌: ಭ್ರಷ್ಟಾಚಾರ ನಡೆದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ನಡೆಸಲಾದ ಡಿಎನ್‌ಎ ಪರೀಕ್ಷೆಯಲ್ಲಿ ಧನಾತ್ಮಕ ಫ‌ಲಿತಾಂಶ ಲಭ್ಯವಾಗಿದೆ. ಡಿಎನ್‌ಎಯಲ್ಲಿ ಇಂಥದ್ದೊಂದು ಪ್ರಕರಣ ಸಾಬೀತಾಗಿದ್ದು ದೇಶದಲ್ಲಿ ಇದೇ ಮೊದಲು!

Advertisement

ಈ ಘಟನೆ ನಡೆದಿರುವುದು ಗುಜರಾತ್‌ನಲ್ಲಿ. ಪಶು ವೈದ್ಯಾಧಿಕಾರಿ ಮತ್ತು ಕೃಷಿ ವಿಜ್ಞಾನಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಘಟಕದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ನಡೆಸಲಾದ ಪರೀಕ್ಷೆ ವರದಿ ಧನಾತ್ಮಕವಾಗಿ ಬಂದಿರುವುದಾಗಿ ವಿಧಿವಿಜ್ಞಾನ ಪ್ರಯೋಗಾಲಯ ಖಾತರಿಪಡಿ ಸಿದೆ. ಇವುಗಳೆರಡೂ ಪ್ರತ್ಯೇಕ ಪ್ರಕರಣಗಳಾಗಿ ದ್ದು, ಒಬ್ಬ ಅಧಿಕಾರಿ 2000 ರೂ., ಮತ್ತೂಬ್ಬರು 12 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಎಸಿಬಿ ದಾಳಿ ನಡೆಸಿದೊಡನೆ, ನೋಟು ನುಂಗಲು ಯತ್ನಿಸಿದ್ದರು. ಆದರೆ, ಅವರ ಯತ್ನವನ್ನು ಅಧಿಕಾರಿಗಳು ವಿಫ‌ಲಗೊಳಿ ಸಿದ್ದರು. ಆರೋಪ ಸಾಬೀತುಪಡಿಸಲೆಂದು ಆ ನೋಟುಗಳಲ್ಲಿದ್ದ ಅಧಿಕಾರಿಗಳ ಲಾಲಾರಸದ ಸ್ಯಾಂಪಲ್‌ಗ‌ಳನ್ನು ಲ್ಯಾಬ್‌ಗ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಲಂಚಕ್ಕೆ ಸಾಕ್ಷಿ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next