Advertisement

ಡಿಎಂಕೆ ವಿಭಜನೆ ಈಗ ಮುಕ್ತ ಮುಕ್ತ; ಸ್ಟಾಲಿನ್‌ಗೆ ಅಳಗಿರಿ ಸವಾಲು

04:24 PM Aug 13, 2018 | Team Udayavani |

ಚೆನ್ನೈ : ಡಿಎಂಕೆ ಪರಮೋಚ್ಚ ನಾಯಕ ಎಂ ಕರುಣಾನಿಧಿ ಅವರು ನಿಧನ ಹೊಂದಿ ಇನ್ನೂ ವಾರ ಆಗಿಲ್ಲ; ಈಗಲೇ ಪಕ್ಷದಲ್ಲಿ ಬಂಡಾಯ ಕಾಣಿಸಿಕೊಳ್ಳಲಾರಂಭಿಸಿದೆ. 

Advertisement

ಇಂದು ಸೋಮವಾರ ದಿ| ಕರುಣಾನಿಧಿ ಅವರ ಸ್ಮಾರಕದಲ್ಲಿ ಬಂದು ನಿಂತ ಅವರ ಪುತ್ರ ಅಳಗಿರಿ, ತನ್ನ ಪರಿತ್ಯಕ್ತ ಸಹೋದರ ಎಂ ಕೆ ಸ್ಟಾಲಿನ್‌ ವಿರುದ್ಧ ಬಹಿರಂಗ ಬಂಡಾಯದ ಬಾವುಟ ಹಾರಿಸಿದರು. 

ಡಿಎಂಕೆ ಪಕ್ಷದ ಸಂಪೂರ್ಣ ಪದಾಧಿಕಾರಿಗಳ ಬೆಂಬಲ ನಗಿದ್ದು  ಪಕ್ಷದ ನಿಜವಾದ ಸದಸ್ಯರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಅಳಗಿರಿ ಹೇಳಿದರು. 

ನಾಳೆ ಮಂಗಳವಾರವೇ ಡಿಎಂಕೆ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅದರಲ್ಲಿ ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರನ್ನು ಪಕ್ಷದ ಪರಮೋಚ್ಚ ನಾಯಕನ ಸ್ಥಾನಕ್ಕೆ ಏರಿಸುವ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆ ಇದೆ. 

ಆದರೆ ಕಾರ್ಯಕಾರಿಣಿಯ ಅಜೆಂಡಾ ಪ್ರಕಾರ ಅಗಲಿದ ಅಧ್ಯಕ್ಷ ಕರುಣಾನಿಧಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಸಭೆಯ ಉದ್ದೇಶವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next