Advertisement

ನ.4, 5: ಕರಾವಳಿಯಲ್ಲಿ ದೀಪಾವಳಿ ಆಚರಣೆ

12:34 AM Oct 29, 2021 | Team Udayavani |

ಉಡುಪಿ: ಮುಂದಿನ ತಿಂಗಳ ಮೊದಲ ವಾರ ದೀಪಾವಳಿ ಹಬ್ಬ ಬರುತ್ತಿದೆ.  ನಾಡಿನಾದ್ಯಂತ ನ. 3ರ ಸಂಜೆ ನೀರು ತುಂಬಿ ನ. 4ರ ಬೆಳಗ್ಗೆ ಚಂದ್ರೋದಯದ ವೇಳೆ ತೈಲಭ್ಯಂಗ (ಎಣ್ಣೆ ಹಚ್ಚಿ ಸ್ನಾನ) ಮಾಡಲಾಗುತ್ತದೆ.

Advertisement

ಚಂದ್ರೋದಯದ ಸಮಯ ಉಡುಪಿ, ಮಂಗಳೂರು, ಕಾಸರಗೋಡಿನಲ್ಲಿ ಬೆಳಗ್ಗೆ 5.39 ಗಂಟೆ, ಪುತ್ತೂರು 5.38, ಶಿವಮೊಗ್ಗ, ಸುಳ್ಯ, ಬೆಳ್ತಂಗಡಿಯಲ್ಲಿ 5.37, ಬೆಂಗಳೂರು 5.28, ಮೈಸೂರು 5.31 ಗಂಟೆ. ನ. 4ರ ಸಂಜೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯಲಿದೆ.

ನ. 5ರ ಬೆಳಗ್ಗೆ ಗೋಪೂಜೆ ನಡೆಯಲಿದೆ. ಮೂಲ್ಕಿ ಶಾಂಭವಿ ನದಿ ದಕ್ಷಿಣದಲ್ಲಿ ನ. 5ರ ಸಂಜೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯುವುದು ಸಂಪ್ರದಾಯ. ಧನ್ವಂತರಿ ಜಯಂತಿಯನ್ನು ನ. 2ರಂದು ಆಚರಿಸಲಾಗುತ್ತದೆ. ನ. 5ರಿಂದ ತುಳಸೀ ಪೂಜೆ ಆರಂಭವಾಗುತ್ತದೆ.

ಶಾಂಭವೀ ನದಿ ದಕ್ಷಿಣದಲ್ಲಿರುವ ಬಪ್ಪನಾಡು, ಕಟೀಲು ಮೊದಲಾದ ದೇವಸ್ಥಾನಗಳಲ್ಲಿ ನ. 4ರ ಸಂಜೆಯೇ ಬಲೀಂದ್ರ ಪೂಜೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಬಲಿ ಹೊರಡುವುದು ಇದೇ ದಿನ. ಇಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ದಿನವೇ ಬಲೀಂದ್ರ ಪೂಜೆ ನಡೆಯುತ್ತದೆ. ಆದರೆ ಊರಿನಲ್ಲಿ ಗದ್ದೆಗೆ ದೀಪ ಇಡುವುದು ಮಾತ್ರ ನ. 5ರ ಸಂಜೆ. ನ. 4ರ ಸಂಜೆ ಲಕ್ಷ್ಮೀ ಪೂಜೆ ನಡೆದರೆ,  ನ. 5ರ ಸಂಜೆ ಕೆಲವೆಡೆಗಳಲ್ಲಿ ಅಂಗಡಿ ಪೂಜೆ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next