Advertisement

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

12:01 AM Sep 04, 2020 | mahesh |

ಮಂಗಳೂರು: ಶಿಕ್ಷಕರ ದಿನಾಚರಣೆ ಸಂದರ್ಭ ನೀಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಈ ಕೆಳಗಿನ ಶಿಕ್ಷಕರು ಆಯ್ಕೆಯಾಗಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆ
ಪ್ರಾಥಮಿಕ ಶಾಲೆ – ಕಿರಿಯ ವಿಭಾಗ
ಬಂಟ್ವಾಳ ಅಳಕೆಮಜಲು ಸ.ಕಿ.ಪ್ರಾ. ಶಾಲೆಯ ಕೆ. ಇಸ್ಮಾಲಿ, ಬೆಳ್ತಂಗಡಿ ರಕ್ತೇಶ್ವರಿ ಪದವು ಸ.ಕಿ.ಪ್ರಾ. ಶಾಲೆಯ ಚೈತ್ರಪ್ರಭಾ ಶ್ರೀಶಾಂ, ಮಂಗಳೂರು ಉತ್ತರ ವಲಯದ ತಣ್ಣೀರುಬಾವಿ ಸ.ಕಿ.ಪ್ರಾ. ಶಾಲೆಯ ಹರಿಣಾಕ್ಷಿ, ಮಂಗಳೂರು ದಕ್ಷಿಣ ವಲಯದ ಮಾಲಾರ್‌ ಸ.ಹಿ.ಪ್ರಾ. ಶಾಲೆಯ ರಾಧಾಕೃಷ್ಣ ರಾವ್‌, ಮೂಡುಬಿದಿರೆ ವಲಯ ಕಡಂದಲೆ ಸ.ಕಿ.ಪ್ರಾ. ಶಾಲೆಯ ಅನಂತ ಪದ್ಮನಾಭ ಜೆನ್ನಿ, ಪುತ್ತೂರು ತಾಲೂಕು ಕುಂಡಾಜೆ ಸ.ಕಿ.ಪ್ರಾ. ಶಾಲೆಯ ಪಿ.ಎಸ್‌. ನಾರಾಯಣ, ಸುಳ್ಯ ತಾಲೂಕು ಬಾನಡ್ಕ ಸ.ಕಿ.ಪ್ರಾ. ಶಾಲೆಯ ಜಾನಕಿ.

ಪ್ರಾಥಮಿಕ ಶಾಲೆ – ಹಿರಿಯ ವಿಭಾಗ
ಬಂಟ್ವಾಳದ ಮಜಿ ಸ.ಹಿ.ಪ್ರಾ. ಶಾಲೆಯ ಸಂಗೀತಾ ಶರ್ಮಾ, ಬೆಳ್ತಂಗಡಿಯ ಕುಂಜತ್ತೋಡಿ ಸ.ಉ.ಪ್ರಾ. ಶಾಲೆಯ ಸಬೀನಾ, ಮಂಗಳೂರು ಉತ್ತರ ವಲಯ ಗಾಂಧೀನಗರ ಸ.ಹಿ.ಪ್ರಾ. ಶಾಲೆಯ ಇಂದ್ರಾವತಿ ಎನ್‌., ಉಳ್ಳಾಲ ಕೋಟೆಪುರ ಟಿಪ್ಪು ಸುಲ್ತಾನ್‌ ಹಿ.ಪ್ರಾ. ಶಾಲೆಯ ಎಂ.ಎಚ್‌. ಮಲಾರ್‌, ಮೂಡುಬಿದಿರೆ ವಲಯದ ಮಾಂಟ್ರಾಡಿ ಸ.ಹಿ.ಪ್ರಾ. ಶಾಲೆಯ ಜಾನೆಟ್‌ ಲೋಬೊ, ಪುತ್ತೂರಿನ ಹಾರಾಡಿ ಸ.ಮಾ.ಹಿ.ಪ್ರಾ. ಶಾಲೆಯ ಪ್ರಶಾಂತ್‌ ಪಿ.ಎಲ್‌., ಸುಳ್ಯದ ಇಡ್ಯಡ್ಕ ಸ.ಉ.ಹಿ.ಪ್ರಾ. ಶಾಲೆಯ ರೇಖಾ ಸರ್ವೋತ್ತಮ ಶೇಟ್‌.

ಪ್ರೌಢ ಶಾಲಾ ವಿಭಾಗ
ಬಂಟ್ವಾಳದ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ರಾಧಾಕೃಷ್ಣ ಬಾಳಿಗ, ಬೆಳ್ತಂಗಡಿಯ ಕೊಕ್ರಾಡಿ ಸ.ಪ್ರೌ. ಶಾಲೆಯ ಅಕ್ಕಮ್ಮ, ಮಂಗಳೂರು ಉತ್ತರ ವಲಯದ ಬಡಗ ಎಕ್ಕಾರು ಸ.ಪ್ರೌ. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಉಸ್ಮಾನ್‌ ಜಿ., ಮಂಗಳೂರು ದಕ್ಷಿಣ ವಲಯ ಕಿನ್ನಿಕಂಬಳ ಸ.ಪ್ರೌ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜಯಶ್ರೀ, ಮೂಡುಬಿದಿರೆ ವಲಯ ಅಳಿಯೂರು ಸ.ಪ್ರೌ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಸಂತ, ಪುತ್ತೂರಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ವೆಂಕಟೇಶ್‌ ದಾಮ್ಲೆ, ಸುಳ್ಯದ ಪಂಜ ಸ.ಪ.ಪೂ. ಕಾಲೇಜು (ಪ್ರೌ.ಶಾ.ವಿ.) ಟೈಟಸ್‌ ವರ್ಗೀಸ್‌.

ಉಡುಪಿ ಜಿಲ್ಲೆ
ಪ್ರೌಢ ಶಾಲಾ ವಿಭಾಗ
ಹೆಮ್ಮಾಡಿ ಜನತಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಿ. ಮೋಹನ ದಾಸ್‌ ಶೆಟ್ಟಿ, ರೆಂಜಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿನಾಯಕ ನಾಯ್ಕ, ಉಡುಪಿ ರಾಜೀವ ನಗರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಂಜೀವ ಎಚ್‌. ನಾಯಕ್‌, ಅಂಪಾರು ಸಂಜಯ ಗಾಂಧಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಉದಯ್‌ ಕುಮಾರ್‌ ಬಿ., ಕೋಟ ವಿವೇಕ ಪ.ಪೂ. ಕಾಲೇಜಿನ ಸಹಶಿಕ್ಷಕ ಪ್ರೇಮಾನಂದ.

Advertisement

ಪ್ರಾಥಮಿಕ ಶಾಲಾ ವಿಭಾಗ
ಹಂಗಾರಕಟ್ಟೆಯ ಸ.ಮಾ. ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸೇಸು, ಕಾರ್ಕಳ ಎಲಿಯಾಳದ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ಸತೀಶ್‌ ರಾವ್‌ ಕೆ., ಕುಂದಾಪುರ ಕೊರವಡಿ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ವಿಶಾಲಾಕ್ಷಿ, ಪಡುಅಲೆವೂರು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ಬೈಂದೂರು ಕೆರಾಡಿ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ವಿಜಯ್‌ ಕುಮಾರ್‌ ಶೆಟ್ಟಿ, ಮುದ್ರಾಡಿ ಸ.ಮಾ.ಹಿ.ಪ್ರಾ. ಶಾಲಾ ಸಹ ಶಿಕ್ಷಕ ಶ್ರೀನಿವಾಸ ಭಂಡಾರಿ, ಬೈಂದೂರು ಸೆಳ್ಕೊಡು ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಭಾಸ್ಕರ್‌ ನಾಯ್ಕ, ಕಲ್ಯಾಣಪುರ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಅರವಿಂದ ಹೆಬ್ಟಾರ್‌, ಹೆಜಮಾಡಿ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸುನೀತಾ ಶೆಟ್ಟಿ, ಬೈಂದೂರು ಸೂರ್ಕುಂದ ಸ.ಕಿ. ಪ್ರಾ. ಶಾಲೆಯ ಸಹ ಶಿಕ್ಷಕ ಫ್ರಾನ್ಸಿಸ್‌ ವಿ.ಟಿ., ಕುಂದಾಪುರ ಪಡುವಾಲೂರು ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಎಚ್‌. ಪ್ರಭಾಕರ ಶೆಟ್ಟಿ, ನಲ್ಲೂರು ಪರಪ್ಪಾಡಿಯ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ಶೆಣೈ, ಬೈಂದೂರು ಯಳೂರುತೊಪು ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಶಶಿಧರ ಶೆಟ್ಟಿ.

ವಿಶೇಷ ಪ್ರಶಸ್ತಿ
ಮಂಗಳೂರು ದಕ್ಷಿಣ ವಲಯದ ವಾಮಂಜೂರಿನ ಅನುದಾನಿತ ಮಂಗಳ ಜ್ಯೋತಿ ಸಮಗ್ರ ಪ್ರೌಢ ಶಾಲೆಯ ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ್‌ ನಾಯ್ಕ (ಕಡ್ತಲ) ಅವರು ಶಾಲೆಯಲ್ಲಿ ವಿಶೇಷ ಅಗತ್ಯವುಳ್ಳ, ಮಕ್ಕಳಿಗೆ ವಿಶೇಷ ತರಬೇತಿ ನೀಡಿ ರಾಜ್ಯ ಮಟ್ಟ/ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವಂತೆ ಶ್ರಮಿಸಿರುವುದನ್ನು ಪರಿಗಣಿಸಿ ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next