Advertisement

ಡಾ|ಅಂಬೇಡ್ಕರ್‌ ನಿಗಮದಡಿ ಪಂಪ್‌ಸೆಟ್‌ ಪರಿಕರ ವಿತರಣೆ

12:00 PM Apr 26, 2022 | Team Udayavani |

ಆಳಂದ: ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮಂಡಳಿಯಡಿ ಆಯ್ಕೆಯಾದ 2018-19ರ 31 ಮಂದಿ ಫಲಾನುಭವಿಗಳಿಗೆ ಪಟ್ಟಣದಲ್ಲಿ ಸೋಮವಾರ ಶಾಸಕ ಸುಭಾಷ ಗುತ್ತೇದಾರ ಪಂಪಸೆಟ್‌ ಸೇರಿದಂತೆ ವಿದ್ಯುತ್‌ ಪರಿಕರಗಳನ್ನು ವಿತರಿಸಿದರು.

Advertisement

ನಿಗಮದ ತಾಂತ್ರಿಕ ಕಾರಣದಿಂದಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡುವಲ್ಲಿ ವಿಳಂಬವಾಗಿದೆ. ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪರಿಶಿಷ್ಟ ಜನಾಂಗದ ಕೃಷಿ ಉತ್ತೇಜಿಸುವ ಸಲುವಾಗಿ ಸರ್ಕಾರ ನಿಗಮದ ಮೂಲಕ ಕೊಳವೆ ಬಾವಿ ಸೇರಿದಂತೆ ಪಂಪಸೆಟ್‌ ಸಮೇತ ಸೌಲಭ್ಯಗಳನ್ನು ಒದಗಿಸುತ್ತಿದೆ. ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸತೀಶ ಬೆಳಾಮಕರ್‌, ಮಹೇಶ ಗುತ್ತೇದಾರ, ಮುಖಂಡ ಮಲ್ಲಿಕಾರ್ಜುನ ಕಂದಗುಳೆ, ಮಲ್ಲಣ್ಣಾ ನಾಗೂರೆ, ಅಶೋಕ ಗುತ್ತೇದಾರ, ಆನಂದ ಗಾಯಕವಾಡ, ಚನ್ನವೀರ ಕಾಳಕಿಂಗೆ ಮತ್ತಿತರರು ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಕೊಳವೆಬಾವಿ, ಪಂಪಸೆಟ್‌ ವಿದ್ಯುತ್‌ ಸಂಪರ್ಕ ಸೇರಿದಂತೆ ಒಟ್ಟು 3.50ಲಕ್ಷ ರೂ. ಗಳನ್ನು ತಲಾ 31 ಫಲಾನುಭವಿಗಳಿಗೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next