Advertisement

ಸಿಎಂ, ನೀರಾವರಿ ಸಚಿವರ ಅಣಕು ತಿಥಿ ಕಾರ್ಡ್‌ ವಿತರಣೆ

08:00 AM Aug 01, 2017 | |

ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್‌ರ ಅಣಕು ತಿಥಿ ಕಾರ್ಡ್‌ ಮುದ್ರಿಸುವ ಮೂಲಕ ಮದ್ದೂರು ಕೆರೆಯಂಗಳದ ಅಹೋರಾತ್ರಿ ಧರಣಿ ನಿರತರು ವಿನೂತನ ಪ್ರತಿಭಟನೆ ನಡೆಸಿದರು. ವಿಸಿ ನಾಲೆಗೆ ನೀರು ಹರಿಸಿ ಜಿಲ್ಲೆಯ ಕೆರೆಕಟ್ಟೆ ತುಂಬಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಳೆದ 24 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸರ್ಕಾರ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ವಿಭಿನ್ನ ಪ್ರತಿಭಟನೆಯಿಂದ ಗಮನ ಸೆಳೆಯುವ ತಂತ್ರಕ್ಕೆ ಮುಂದಾಗಿದೆ.

Advertisement

ಅಣಕು ಉತ್ತರ ಕ್ರಿಯಾದಿ ಭೂ ಶಾಂತಿ ಆಹ್ವಾನ ಪತ್ರಿಕೆ ಕಾರ್ಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಭಾವಚಿತ್ರ ಸಹಿತ ಪ್ರಕಟಿಸಿರುವ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಮಂಗಳವಾರ ಬೆಳಗ್ಗೆ 11 ಗಂಟೆಗೆ ಕೆರೆಯಂಗಳದಲ್ಲಿ ನಡೆಯುವ ತಿಥಿ ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ, ರಾತ್ರಿ 6 ಗಂಟೆಗೆ ಗುರುಪುತ್ರ ವಳಗೆರೆಹಳ್ಳಿ ರಮೇಶ್‌ ಮತ್ತು ತಂಡದವರಿಂದ ಅಖಂಡ ಭಜನೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಮುದ್ರಿಸಿ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next