Advertisement

ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್‌ ವಿತರಣೆ

06:13 PM May 07, 2020 | Suhan S |

ಗಂಗಾವತಿ: ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದ್ದು, ಪ್ರತಿಯೊಬ್ಬರು ಕಾರ್ಮಿಕರಿಗೆ ನೆರವಾಗುವ ಮೂಲಕ ಪರಿಸ್ಥಿತಿ ನಿಭಾಯಿಸುವಂತೆ ಡಿವೈಎಸ್‌ಪಿ ಡಾ| ಚಂದ್ರಶೇಖರ ಹೇಳಿದರು.

Advertisement

ಅವರು ನಗರದ ಹಮಾಲಿ ಕಾರ್ಮಿಕರ ಕಾಲೋನಿಯ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಸಂಘದ ವತಿಯಿಂದ 70 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸಿ ಮಾತನಾಡಿದರು. ಸರಕಾರಿ ಶಾಲಾ-ಕಾಲೇಜುಗಳಲ್ಲಿ ಬಡವರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಸಹಾಯ ಸಹಕಾರ ಮಾಡುವಂತೆ ಮನವಿ ಮಾಡಿದರು.

ಬಿಇಒ ಸೋಮಶೇಖರಗೌಡ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ಮುಖ್ಯಶಿಕ್ಷಕ ಚಂದ್ರಶೇಖರ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿ ಕಾರಿಗಳ ಸಂಘದ ಕೆ. ಗಿರೆಡ್ಡಿ, ಟಿ. ಆಂಜನೇಯ, ಎಂ. ಶ್ರೀಪಾದ ಜೋಶಿ, ರಾಜರಾಮ, ಕೃಷ್ಣರಾವ್‌ ದೇಸಾಯಿ, ಸುರೇಶ ಸೊನ್ನದ, ಶಿವಪುತ್ರಪ್ಪ, ವಿ.ಎನ್‌. ರಾಯಕರ್‌, ಶಿಕ್ಷಕ ಸಿದ್ದಲಿಂಗೇಶ ಪೂಲಭಾವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next