Advertisement

ಲಾಕ್‌ಡೌನ್‌ ತೆರವಿನ ವರೆಗೆ ಆಹಾರ ವಿತರಣೆ: ಭರತ್‌ ಶೆಟ್ಟಿ

12:43 AM Apr 10, 2020 | Sriram |

ಕಾವೂರು: ದೇಶ ಕೋವಿಡ್ 19 ಸೋಂಕಿನಿಂದ ಪಾರಾಗುವವರೆಗೆ ಲಾಕ್‌ಡೌನ್‌ ಇರುವ ಸಾಧ್ಯತೆಯಿದ್ದು ಕ್ಷೇತ್ರದಲ್ಲಿ ನಿರಂತರವಾಗಿ ಅರ್ಹರಿಗೆ, ಕಷ್ಟದಲ್ಲಿರುವವರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ ನಡೆಯಲಿದೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದರು.

Advertisement

ಗುರುವಾರ ಕಾವೂರು ಬಿಜೆಪಿ ಕಚೇರಿಯಲ್ಲಿ ಕಾರ್ಮಿಕರು ಹಾಗೂ ಫಲಾನುಭವಿಗಳಿಗೆ ಪಕ್ಷ, ದಾನಿಗಳು ಹಾಗೂ ವೈಯುಕ್ತಿಕ ನೆಲೆಯಲ್ಲಿ ಆಹಾರ ದಿನಸಿ ವಿತರಿಸಿ ಅವರು ಮಾತನಾಡಿದರು.

ಪ್ರಥಮ ಹಂತದಲ್ಲಿ 12,500 ಕಿಟ್‌ ವಿತರಣೆ ನಡೆದಿದೆ. 10,000 ಕಿಟ್‌ ವಿತರಣೆಗೆ ಸಿದ್ಧಗೊಳ್ಳುತ್ತಿದೆ. ಅಕ್ಕಿ, ಗೋಧಿ , ಸಕ್ಕರೆ, ಬೇಳೆ, ಎಣ್ಣೆ, ಕಡಲೆ, ಸೋಪು ಸಹಿತ ವಸ್ತುಗಳನ್ನು ಒದಗಿಸಲಾಗುತ್ತಿದೆ. ಸೋಂಕು ಹರಡದಂತೆ 15,000 ಮಾಸ್ಕ್ ವಿತರಣೆ ಮಾಡಲಾಗಿದೆ.
ಪ್ರಥಮ ಹಂತದಲ್ಲಿ 245 ಬೂತ್‌ ಮಟ್ಟದಲ್ಲಿ 50 ಲಕ್ಷ ರೂ.ವೆಚ್ಚದ ಆಹಾರ ಸಾಮಗ್ರಿ ಅರ್ಹರಿಗೆ ತಲುಪಿಸುವ ಕೆಲಸ ನಡೆದಿದೆ. ಅಂಟು ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಹಿತಿ ಪತ್ರ ನೀಡಲಾಗುತ್ತಿದೆ. ಒಟ್ಟು 45-50 ಲಕ್ಷ ರೂ. ವೆಚ್ಚದ ಆಹಾರ ಸಾಮಗ್ರಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್‌ ರಾಜ್‌ ಕೃಷ್ಣಾಪುರ, ಪಾಲಿಕೆ ಸದಸ್ಯರಾದ ಜಯಾನಂದ ಅಂಚನ್‌, ಲೋಹಿತ್‌ ಅಮೀನ್‌, ರಾಜೇಶ್‌ ಕೊಟ್ಟಾರಿ, ಸಂದೀಪ್‌ ಪಚ್ಚನಾಡಿ, ವಿಠಲ ಸಾಲಿಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next