Advertisement

ಆರ್ಯ ವೈಶ್ಯರಿಂದ ಆಹಾರ ಪೊಟ್ಟಣ ವಿತರಣೆ

08:10 PM Jun 21, 2021 | Team Udayavani |

ರಾಮನಗರ: ಬೆಂಗಳೂರಿನಲ್ಲಿ ಭಾನುವಾರ ನಡೆದ ಶ್ರೀ ವಾಸವಿ ಪೀಠಾರೋಹಣ ಮಹೋತ್ಸವ ಹಿನ್ನೆಲೆಯಲ್ಲಿ ನಗರದಆರ್ಯವೈಶ್ಯಸಮುದಾಯದವರು ವೃದ್ಧಾಶ್ರಮಗಳಿಗೆ ಹಣ್ಣುಗಳು ಮತ್ತು ಬಡವರು, ನಿರ್ಗತಿಕರಿಗೆ ಸಿದ್ಧಪಡಿಸಿದಆಹಾರ ವಿತರಿಸಿದರು.

Advertisement

ಆರ್ಯ ವೈಶ್ಯ ಕುಲಗುರುಗಳಾದ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಶ್ರೀವಾಸವಿ ಪೀಠಾರೋಹಣ ಮಾಡಿದ ಶುಭಸಂದರ್ಭಕ್ಕೆ ಕರ್ನಾಟಕ ಆರ್ಯ ವೈಶ್ಯಮಹಾಸಭೆ ನೀಡಿದ್ದ ಕರೆಯನ್ವಯ ಇಲ್ಲಿನಆರ್ಯ ವೈಶ್ಯ ಸಮುದಾಯ ತಮ್ಮ ಸಂಘಟನೆಯ ಮೂಲಕ ನೂರಾರು ಮಂದಿನಿರ್ಗತಿಕರು, ಬಡವರು, ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು.

ಜತೆಗೆವೃದ್ಧಾಶ್ರಮಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಣ್ಣುಗಳನ್ನು ವಿತರಿಸಿದರು.ಕಾರ್ಯದರ್ಶಿ ಕೆ.ವಿ.ಉಮೇಶ್‌,ವಾಸವಿ ವಿದ್ಯಾನಿಕೇತನ ಟ್ರಸ್ಟ್‌ನ ಕೆ.ಎಸ್‌.ನಾಗಪ್ರದೀಪ್‌, ವಾಸವಿ ಯೂತ್ಸ್ಫೋರಂ ಸದಸ್ಯರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next