Advertisement

ಮನೆ ನಿರ್ಮಿಸಿಕೊಳ್ಳಲು  ಕಾರ್ಯಾದೇಶ ಪತ್ರ ವಿತರಣೆ

12:43 PM Nov 03, 2017 | Team Udayavani |

ಕೆ.ಆರ್‌.ಪುರ: ಪರಿಶಿಷ್ಟ ವರ್ಗ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಫ‌ಲಾನು¸‌ವಿಗಳಿಗೆ 4 ಲಕ್ಷ ರೂ. ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಕಾರ್ಯಾದೇಶ ಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಬಿ.ಎ.ಬಸವರಾಜ ತಿಳಿಸಿದರು.

Advertisement

ಶಾಸಕರ ಗೃಹ ಕಚೇರಿಯಲ್ಲಿ ಅರ್ಹ ಪಲಾನು¸‌ವಿಗಳಿಗೆ ಕಾರ್ಯಾದೇಶ ಪತ್ರ ನೀಡಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸ್ವಂತ ಸ್ಥಳವಿದ್ದರೂ ಮನೆ ನಿರ್ಮಿಸಿಕೊಳ್ಳು ಬಡ ಮತ್ತು ಮಧ್ಯಮ ವರ್ಗದವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಧನ ಸಹಾಯ ಮಾಡುತ್ತಿದೆ.

ಶಾಸಕರ ಹಾಗೂ ಬಿಬಿಎಂಪಿ ಅನುದಾನದಲ್ಲಿ 645 ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರ ನೀಡುವ ಸಹಾಯಧನದ ಜತೆ ಸ್ವಂತ ಹಣ ಬಳಸಿ ಮನೆ ನಿರ್ಮಿಸಿಕೊಳ್ಳುವಂತೆ ಫ‌ಲಾನುಭವಿಗಳಿಗೆ ಸಲಹೆ ನೀಡಿದರು.

ಪಾಲಿಕೆ ಸದಸ್ಯರಾದ ಎಸ್‌.ಜಿ.ನಾಗರಾಜ್‌, ಎಂ.ಎನ್‌.ಶ್ರೀಕಾಂತ್‌, ಜಯಪ್ರಕಾಶ್‌, ಸುರೇಶ್‌, ರಾಧಮ್ಮ ವೆಂಕಟೇಶ್‌, ಮಂಜುನಾಥ್‌ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್‌, ಜಲ ಮಂಡಳಿ ಸದಸ್ಯ ನಾರಾಯಣಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮನೋಜ್‌, ಡಿಸಿಸಿ ಸದಸ್ಯ ಶಿವಕುಮಾರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next