Advertisement

ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ

06:50 AM Jun 19, 2018 | Team Udayavani |

ಬೆಂಗಳೂರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ವಿಧಾನಪರಿಷತ್‌ಗೆ ಮತ್ತೂಂದು ಅವಧಿಗೆ ಮುಂದುವರಿಸದ ಬಗ್ಗೆ ಬೇಸರಗೊಂಡಿದ್ದ ಅವರು,ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆಯೂ ಅತೃಪ್ತಿ ಹೊರ ಹಾಕಿದ್ದಾರೆ. ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ವಿಧಾನಪರಿಷತ್‌ಗೆ ಮತ್ತೂಂದು ಅವಧಿಗೆ ಮುಂದುವರಿಸಿ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ, ಯಾವಕಾರಣಕ್ಕೆ ಮಾತಿಗೆ ತಪ್ಪಿದ್ದೀರಿ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಒಂದು ಸಮುದಾಯದ ನಾಯಕ. ಜತೆಗೆ, ಹಿಂದುಳಿದ ವರ್ಗಗಳ ನಾಯಕ. ನನ್ನ ಅವಿರತ ಶ್ರಮ, ಬದಟಛಿತೆ, ನಂಬಿಕೆಗೆ ಸೋಲಾಗಿರುವುದಕ್ಕೆ ಅತೀವ ನೋವಾಗಿದೆ. ನನ್ನ ಜೀವನದ ಕೊನೆ ಹಂತದಲ್ಲಿ ಸಕ್ರಿಯ ರಾಜಕೀಯಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ’ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next