Advertisement

Karnataka ಮುಖ್ಯಮಂತ್ರಿ ಸ್ಥಾನದ ಚರ್ಚೆ ಅಪ್ರಸ್ತುತ: ಡಾ| ರಂಗನಾಥ್‌

11:13 PM Sep 10, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದ ಮೇಲೆ ಆ ವಿಷಯದ ಮೇಲಿನ ಚರ್ಚೆಯೇ ಅಪ್ರಸ್ತುತ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆಂದು ಹೈಕಮಾಂಡ್‌ ಹೇಳಿದೆ, ಅವರೇ ಇರುತ್ತಾರೆ ಎಂದು ಕುಣಿಗಲ್‌ ಕಾಂಗ್ರೆಸ್‌ ಶಾಸಕ ಡಾ| ರಂಗನಾಥ್‌ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಶಿಸ್ತಿನ ಪಕ್ಷ. ನಾವೆಲ್ಲ ಶಿಸ್ತಿನ ಸಿಪಾಯಿಗಳು. ಏನೋ ಸಣ್ಣ-ಪುಟ್ಟ ಗೊಂದಲದ ಹೇಳಿಕೆಗಳು ಹೊರಬಂದಿರಬಹುದು. ಅದೂ ಆಗಬಾರದು ಎನ್ನುವುದು ನಮ್ಮ ಅಪೇಕ್ಷೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next