Advertisement

ಶಾಲಾ ಮಕ್ಕಳಿಗೆ ರಿಯಾಯಿತಿ ದರ

11:25 AM Aug 19, 2018 | |

ಮಕ್ಕಳ ಸಿನಿಮಾ ಮಕ್ಕಳಿಗೆ ತಲುಪಿದಾಗ ಆ ಸಿನಿಮಾದ ಆಶಯ ಈಡೇರುತ್ತದೆ. ಆದರೆ, ಬಹುತೇಕ ಮಕ್ಕಳ ಸಿನಿಮಾಗಳು ಮಕ್ಕಳಿಗೆ ತಲುಪುವುದೇ ಇಲ್ಲ. ಆದರೆ, “ರಾಮರಾಜ್ಯ’ ತಂಡ ಮಾತ್ರ ಮಕ್ಕಳ ಸಿನಿಮಾ ಮಕ್ಕಳಿಗೆ ತಲುಪಬೇಕೆಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಸಿನಿಮಾ ತೋರಿಸುತ್ತಿದೆ. ಈ ಮೂಲಕ ಮಕ್ಕಳ ಸಿನಿಮಾವನ್ನು ಮಕ್ಕಳಿಗೆ ತಲುಪಿಸುತ್ತಿದೆ. 

Advertisement

“ರಾಮರಾಜ್ಯ’ ಎರಡು ವಾರಗಳ ಹಿಂದೆ ತೆರೆಕಂಡಿತ್ತು. ಅನ್ಯಾಯದ ವಿರುದ್ಧ ಮಕ್ಕಳು ಯಾವ ರೀತಿ ಸಿಡಿದೇಳುತ್ತಾರೆ, ಹೇಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ. ಚಿತ್ರವನ್ನು ದೊಡ್ಡವರ ಜೊತೆ ಮಕ್ಕಳು ನೋಡಿದರೆ ಸಿನಿಮಾ ನಿರ್ಮಿಸಿದ್ದೂ ಸಾರ್ಥಕ ಎಂದುಕೊಂಡ ಚಿತ್ರತಂಡ ರಿಯಾಯಿತಿ ದರದಲ್ಲಿ ಮಕ್ಕಳಿಗೆ ಸಿನಿಮಾ ತೋರಿಸುತ್ತಿದ್ದು, ಈಗಾಗಲೇ ಒಂದು ವಾರಗಳ ಕಾಲ ನವರಂಗ್‌ ಚಿತ್ರದಲ್ಲಿ ಮಕ್ಕಳು ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಶಾಲಾ ಮಕ್ಕಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 

ಮಕ್ಕಳು ಮೆಚ್ಚಿಕೊಂಡ ರೀತಿಯಿಂದ ಖುಷಿಯಾದ ಚಿತ್ರತಂಡ ಈಗ ಮತ್ತೆ ಒಂದು ವಾರ ರಿಯಾಯಿತಿ ದರದ ಪ್ರದರ್ಶನವನ್ನು ಮುಂದುವರಿಸಿದೆ. ಜೊತೆಗೆ ಮುಂದಿನ ವಾರದಿಂದ ಮತ್ತಷ್ಟು ಚಿತ್ರಮಂದಿರಗಳಲ್ಲಿ ರಿಯಾಯಿತಿ ದರದಲ್ಲಿ “ರಾಮರಾಜ್ಯ’ ಚಿತ್ರವನ್ನು ಮಕ್ಕಳಿಗೆ ತೋರಿಸುವ ಉದ್ದೇಶವಿದೆ. ಈ ಚಿತ್ರವನ್ನು ನೀಲ್‌ ಕೆಂಗಾಪುರ ನಿರ್ದೇಶಿಸಿದ್ದು, ಆರ್‌.ಶಂಕರ್‌ಗೌಡ ನಿರ್ಮಿಸಿದ್ದಾರೆ. ಚಿತ್ರದಲ್ಲಿ  ಏಕಾಂತ್‌, ಹೇಮಂತ್‌, ಕಾರ್ತಿಕ್‌, ಶೋಯೆಭ್‌, ಅಶ್ವಿ‌ನಿ, ಯತಿರಾಜ್‌ ಮತ್ತಿತರರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next