Advertisement

Padubidri: ಶಾಲಾ ಆವರಣದೊಳಗೆ ರಿಕ್ಷಾ ಢಿಕ್ಕಿ; ಬಾಲಕನಿಗೆ ತೀವ್ರ ಗಾಯ

08:44 PM Oct 28, 2024 | Team Udayavani |

ಪಡುಬಿದ್ರಿ: ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲಾ ಆವರಣದೊಳಗೆ ರಿಕ್ಷಾವೊಂದು ಶನಿವಾರದಂದು ಶಾಲೆ ಬಿಡುವ ವೇಳೆ ಪ್ರವೇಶಿಸಿ ಶಾಲಾ ಬಾಲಕ ಎರ್ಮಾಳು ಬಡಾ ನಿವಾಸಿ ಭವಿನ್‌ ಶೆಟ್ಟಿ(7)ಗೆ ಢಿಕ್ಕಿಯಾದ ಪರಿಣಾಮ ಎರಡೂ ಕಾಲುಗಳಿಗೆ ತೀವ್ರತರ ಗಾಯಗಳಾಗಿವೆ.

Advertisement

ಆತನನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿರುವ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯತನದ ಚಾಲನೆಗಾಗಿ ರಿಕ್ಷಾ ಚಾಲಕ ಸದಾನಂದ ದೇವಾಡಿಗ ಎಂಬಾತನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next