Advertisement

ಅವ್ಯವಸ್ಥೆ ಆಗರವಾದ ವಸತಿ ನಿಲಯ

03:37 PM Nov 16, 2018 | |

ಬಸವಕಲ್ಯಾಣ: ಕಿಟ್ಟಾ ಗ್ರಾಮದ ಹೊರವಲಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ಬಾಲಕರ ಡಿ.ದೇವರಾಜ್‌ ಅರಸು ವಸತಿ ನಿಲಯ ಹೊರಗಿನ ಆವರಣ ಹಸಿರು ತೋರಣಗಳಿಂದ ಕಂಗೊಳಿಸುತ್ತಿದ್ದರೆ, ಒಳಗಡೆ ಮಾತ್ರ ಅಸ್ವತ್ಛತೆ ಹಾಗೂ ಹಲವು ಸಮಸ್ಯೆಗಳ ಮೂಲವಾಗಿದೆ. ಈ ವಸತಿ ನಿಲಯದಲ್ಲಿ ಸುಮಾರು 50 ಜನ ಪ್ರವೇಶ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ.

Advertisement

ಆದರೆ ಅಧಿ ಕಾರಿಗಳ ನಿರ್ಲಕ್ಷ್ಯವೋ ಅಥವಾ ಸಿಬ್ಬಂದಿಗಳು ನಿರ್ಲಕ್ಷ್ಯವೋ, ವಿದ್ಯಾರ್ಥಿಗಳು ಮಾತ್ರ ಸೌಕರ್ಯಗಳಿಂದ ಚಿತರಾಗಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಅಸ್ವತ್ಛತೆಯಿಂದ ಎನ್‌1ಎಚ್‌1 ಸೋಂಕು ತಗುಲಿ ಈಚೆಗೆ ಗ್ರಾಮದಲ್ಲಿ ವ್ಯಕ್ತಿ ಮೃತ್ತಪಟ್ಟಿರುವ ಘಟನೆ ನಡೆದಿದೆ. ಆದರೂ ಸಂಬಂಧಪಟ್ಟವರು ಸರ್ಕಾರದಿಂದ ಮಂಜೂರಾದ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಆರೋಗ್ಯಯುತ ವಾತವರಣ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ವಸತಿ ನಿಲಯದ ಆವರಣವನ್ನು ಮಾತ್ರ ಹಸಿರು ಕಾಣುವಂತೆ ಮಾಡಲಾಗಿದೆ ವಿನಃ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬೇಕಾಗುವ
ಸೌಕರ್ಯಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಅಡುಗೆ ಕೋಣೆ ಅನೈರ್ಮಲ್ಯದ ತಾಣವಾಗಿದೆ. ನೀರಿನ ಟ್ಯಾಂಕ್‌ ಮೇಲೆ
ಯಾವುದೇ ಮುಚ್ಚಳ ಅಳವಡಿಸಲಿಲ್ಲ. ಹೀಗಾಗಿ ನೀರಿನಲ್ಲಿ ಕಸಕಡ್ಡಿ ಬಿದ್ದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾದರೂ ಅದನ್ನೇ ನಿತ್ಯ ಬಳಕೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ವಾಟರ್‌ ಹೀಟರ್‌ ಹಾಳು: ವಸತಿ ನಿಲಯದ ಮೇಲೆ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾಗಿದ್ದ, ವಾಟರ್‌ ಹೀಟರ್‌ ಯಂತ್ರ ಉಪಯೋಗಕ್ಕೆ ಬಾರದಂತಾಗಿದೆ. ಆದರೂ ಈವರೆಗೆ ಅದನ್ನು  ದುರಸ್ಥಿ ಮಾಡುವುದು ಅಥವಾ ಬೇರೆ ವ್ಯವಸ್ಥೆ ಮಾಡಲು ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಚಳಿಗಾಲದಲ್ಲೂ ತಣ್ಣೀರು ಸ್ನಾನ ಮಾಡಿ ಶಾಲೆ ಹೋಗುವ ಸ್ಥಿತಿ ಇದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ವಸತಿ ನಿಲಯದಲ್ಲಿ ವಾಟರ್‌ μಲ್ಟರ್‌ ಯಂತ್ರ ನೀಡಲಾಗಿದೆ. ಇದು ಮಕ್ಕಳಿಗೆ ಉಪಯೋಗಕ್ಕೆ ಬಾರದೇ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಆದರೂ ಸಂಬಂಧ ಪಟ್ಟವರು ದುರಸ್ಥಿ ಮಾಡಲು ಮುಂದಾಗಿಲ್ಲ.
ಹೀಗಾಗಿ ಇಟ್ಟ ಸ್ಥಳದಲ್ಲೆ ಧೂಳು ತಿನ್ನುತ್ತಿದೆ. 

ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಸತಿ ನಿಲಯದಲ್ಲಿ ಅಳವಡಿಸಲಾದ ವಿದ್ಯುತ್‌ ಬ್ಯಾಟರಿ ಹಾಗೂ ಸೋಲಾರ್‌ ಆಧಾರದಲ್ಲಿ ಆವರಣದಲ್ಲಿ ಅಳವಡಿಸಲಾಗಿದ್ದ ದೀಪಕೂಡ ಹಾಳಾಗಿದ್ದರೂ ದುರಸ್ಥಿ ಮಾಡುವ ಕೆಲಸ ನಡೆದಿಲ್ಲ. ಹೀಗಾಗಿ ರಾತ್ರಿ ವಿದ್ಯುತ್‌ ಕೈ ಕೊಟ್ಟರೆ ದೇವರ ಬಲ್ಲ ಎಂಬಂತಾಗಿದೆ ಇಲ್ಲಿ ಸ್ಥಿತಿ.

Advertisement

ಅಡುಗೆ ಕೋಣೆ ಅವ್ಯವಸ್ಥೆ ತಾಣ: ಅಡುಗೆ ಮಾಡುವ ಕೋಣೆ ಅವ್ಯವಸ್ಥೆಯ ತಾಣವಾಗಿದೆ. ಒಳಗಡೆ ಹೋದರೆ ಸಾಕು ಪಾತ್ರೆಗಳು ಹಾಗೂ ಊಟ ಮಾಡುವ ತಟ್ಟೆ ಅಲ್ಲಲ್ಲಿ ಬಿದ್ದಿವೆ. ನೀರಿನ ಟ್ಯಾಂಕ್‌ ಮೇಲೆ ಯಾವುದೇ ಮುಚ್ಚಳ ಅಳವಡಿಸದೇ ಎಲ್ಲಾ ಕೆಲಸಕ್ಕೂ ಇಲ್ಲಿನ ನೀರನ್ನೇ ಬಳಸಲಾಗುತ್ತ¨

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next