Advertisement

ಪರಮೇಶ್ವರ್‌ಗೆ ಚೀಟಿ ಕಳಿಸಿ ಪೇಚಿಗೆ ಸಿಲುಕಿದ ದಿನೇಶ್‌ 

01:25 AM Jan 19, 2019 | Team Udayavani |

ಬೆಂಗಳೂರು: ಎಚ್‌.ಕೆ.ಪಾಟೀಲ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಭಾಷಣ ಮಾಡುವ ಸಂದರ್ಭದಲ್ಲಿ ಬೇಗ ಭಾಷಣ ಮಕ್ತಾಯಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಚೀಟಿ ಕಳಿಸಿ, ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.

Advertisement

 ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 1 ಗಂಟೆಗೆ ಆರಂಭವಾಯಿತು. ಎಲ್ಲ ನಾಯಕರು ಮಾತನಾಡುವ ಹೊತ್ತಿಗೆ ವಿಳಂಬವಾಗಿತ್ತು. ಉಪ ಮುಖ್ಯಮಂತ್ರಿ ಪರಮೇಶ್ವರ್‌ ಮಾತು ಆರಂಭಿಸಿದಾಗ ಮಧ್ಯಾಹ್ನ 2.30 ಗಂಟೆಯಾಗಿತ್ತು. ಮೂರು ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಅಲ್ಲದೇ ಅವರ ಭಾಷಣದ ನಂತರ ಈಶ್ವರ್‌ ಖಂಡ್ರೆ, ದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದರಾಮಯ್ಯ ಅವರೂ ಭಾಷಣ ಮಾಡುವುದಿತ್ತು. ಹೀಗಾಗಿ, ಪರಮೇಶ್ವರ್‌ಗೆ ಬೇಗ ಭಾಷಣ ಮುಗಿಸುವಂತೆ ದಿನೇಶ್‌ ಗುಂಡೂರಾವ್‌ ಚೀಟಿ ಕಳುಹಿಸಿದರು. ಇದಕ್ಕೆ ಕೋಪಗೊಂಡ ಪರಮೇಶ್ವರ್‌, ನನಗ್ಯಾಕಪ್ಪಾ ಚೀಟಿ ಕೊಡ್ತೀರಾ ಎಂದು ಸಿಟ್ಟಿನಿಂದಲೇ ಚೀಟಿಯನ್ನು ಹರಿದು ಹಾಕಿ ಭಾಷಣ ಮುಂದು ವರೆಸಿದರು.

ಭಾಷಣ ಮುಗಿದ ತಕ್ಷಣ ಸಭೆಯಿಂದಲೂ ಹೊರಟು ಹೋದರು. ಪರಮೇಶ್ವರ್‌ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಈಶ್ವರ್‌ ಖಂಡ್ರೆ ಅವರನ್ನು ಮಧ್ಯ ಕೂಡಿಸಿಕೊಂಡು ಮಾತನಾಡುತ್ತಿದ್ದರು. ಇದರಿಂದ ಇರಿಸು ಮುರಿಸಾದ ದಿನೇಶ್‌, ಪರಮೇಶ್ವರ್‌ ಅವರು ಬೇಗ ಭಾಷಣ ಮುಗಿಸಿದರೆ, ನಂತರ ಈಶ್ವರ್‌ ಖಂಡ್ರೆ ಭಾಷಣ ಮಾಡಲು ಎದ್ದು ಹೋಗುತ್ತಾರೆ ಎನ್ನುವ ಕಾರಣಕ್ಕೆ ಚೀಟಿ ನೀಡಿದ್ದರು ಎಂದು ತಿಳಿದು ಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next