Advertisement

ದಿನೇಶ್‌ ಗುಂಡೂರಾವ್‌ ಬಕೆಟ್‌ ಹಿಡಿಯೋದು ನಿಜ: ಎಂಟಿಬಿ

11:15 PM Sep 28, 2019 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕುರಿತು ಎಸ್‌.ಟಿ.ಸೋಮಶೇಖರ್‌ ಹೇಳಿರುವುದು ಸರಿಯಾಗಿಯೇ ಇದೆ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಮಶೇಖರ್‌ ಮಾತುಗಳಿಗೆ ನನ್ನ ಸಹಮತವಿದೆ. ದಿನೇಶ್‌ ಗುಂಡೂರಾವ್‌ ಸಿದ್ದರಾಮಯ್ಯಗೆ ಬಕೆಟ್‌ ಹಿಡೀತಾರೆ ಎಂದರು. ದಿನೇಶ್‌ ಗುಂಡೂರಾವ್‌ ಅವರು ಸಿದ್ದರಾಮಯ್ಯ ಅವರ ಚೇಲಾ ಹೌದು, ಬಕೆಟ್‌ ಹಿಡಿಯುವುದೂ ಹೌದು, ಅವರಿಂದಲೇ ಪಕ್ಷ ಈ ಸ್ಥಿತಿಗೆ ಬಂದಿದೆ.

Advertisement

ಸೋಮಶೇಖರ್‌ ಹೇಳಿರುವುದು ಸತ್ಯವಾಗಿದೆ ಎಂದರು. ಕೆ.ಎಚ್‌.ಮುನಿಯಪ್ಪ ಸೋಲಿಗೆ ರಮೇಶ್‌ ಕುಮಾರ್‌ ಕಾರಣ. ಮುನಿಯಪ್ಪ ಅವರು ಸತ್ಯ ಮಾತನಾಡಿದ್ದಾರೆ. ಇದು ಜಗತ್ತಿಗೆ ಗೊತ್ತಿರುವ ವಿಚಾರ. ರಮೇಶ್‌ಕುಮಾರ್‌ ವಿರುದ್ಧ ಕ್ರಮ ಯಾಕೆ ಇಲ್ಲ ಎಂದು ಪ್ರಶ್ನಿಸಿದರು. ಚುನಾವಣಾ ಆಯೋಗದ ದಿನಾಂಕ ನಿಗದಿಪಡಿಸಿರುವುದು ಹಾಗೂ ಸುಪ್ರೀಂಕೋರ್ಟ್‌ ಕ್ರಮಕ್ಕೆ ನಮ್ಮ ಸ್ವಾಗತವಿದೆ. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ, ಸುಪ್ರೀಂಕೋರ್ಟ್‌ ತೀರ್ಪಿಗೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಹೊಸಕೋಟೆಯಲ್ಲಿ ಬಿಜೆಪಿಯಿಂದ ಶರತ್‌ ಬಚ್ಚೇಗೌಡ ಟಿಕೆಟ್‌ ಕೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣ ದಲ್ಲಿ ಪರ ವಿರೋಧ ಸಹಜ. ಎಲ್ಲವನ್ನೂ ಎದುರಿಸಲು ನಾವು ಸಿದ್ಧವಾಗಿದ್ದೇವೆ. ಟಿಕೆಟ್‌ ಯಾರಿಗೆ ನೀಡಲಿದೆ ಎನ್ನುವುದನ್ನು ಬಿಜೆಪಿ ಹೈಕಮಾಂಡ್‌ ತೀರ್ಮಾನಿ ಸಲಿದೆ. ಸುಪ್ರೀಂತೀರ್ಪಿನ ಬಳಿಕ ನನ್ನ ಮುಂದಿನ ರಾಜಕೀಯ ತೀರ್ಮಾನ ಪ್ರಕಟಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next