Advertisement

Utsavam; ತೆಲುಗಿನತ್ತ ಹೊರಟ ದಿಲೀಪ್ ಪ್ರಕಾಶ್

06:15 PM Feb 12, 2024 | Team Udayavani |

ಕನ್ನಡದಲ್ಲಿ ಲಾಂಚ್‌ ಆದ ಅದೆಷ್ಟೋ ನಟ-ನಟಿಯರು ಬೇರೆ ಭಾಷೆಗಳಲ್ಲಿ ಬಿಝಿಯಾಗುತ್ತಿದ್ದಾರೆ. ಅದೇ ಕಾರಣಕ್ಕೆ ಕಲೆಗೆ ಭಾಷೆಯ ಹಂಗಿಲ್ಲ ಅನ್ನೋದು. ಈಗ ಕನ್ನಡದಲ್ಲಿ ಹೀರೋ ಆಗಿ ಲಾಂಚ್‌ ಆದ ನಟ ತೆಲುಗಿನಲ್ಲಿ ಬಿಝಿಯಾಗುತ್ತಿದ್ದಾರೆ. ಅವರೇ ದಿಲೀಪ್‌ ಪ್ರಕಾಶ್‌.

Advertisement

ಮಹೇಶ್‌ ಬಾಬು ನಿರ್ದೇಶನದ “ಕ್ರೇಜಿಬಾಯ್‌’ ಚಿತ್ರದ ಮೂಲಕ ಕನ್ನಡದಲ್ಲಿ ಹೀರೋ ಆಗಿ ಎಂಟ್ರಿಕೊಟ್ಟ ದಿಲೀಪ್‌ ಈಗ, ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದರು, ನಾಟಕ ರಂಗದ ಸುತ್ತ ಹೆಣೆಯಲಾಗಿರುವ ಈ ಚಿತ್ರಕ್ಕೆ ಉತ್ಸವಂ ಎಂದು ಹೆಸರಿಡಲಾಗಿದೆ. ಬಿಡುಗಡೆಯ ಹಂತಕ್ಕೆ ಚಿತ್ರ ಬಂದಿದೆ.

ಈ ಚಿತ್ರದ ಮೇಲೆ ದಿಲೀಪ್‌ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ರಾಜೇಂದ್ರ ಪ್ರಸಾದ್‌, ಪ್ರಕಾಶ್‌ ರೈ, ನಾಜರ್‌, ಬ್ರಹ್ಮಾನಂದಂ, ಆಲಿ, ಪ್ರೇಮಾ ಮೊದಲಾದವರಿದ್ದಾರೆ. ಅರುಣ್‌ ಸಾಯಿ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್‌ ರುಬೆನ್ಸ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next