Advertisement

ದಿಗ್ವಿಜಯ್‌ಗೆ ನಕ್ಸಲ್‌ ನಂಟು?;ಪೊಲೀಸರಿಗೆ ಸಿಕ್ಕಿದ ಪತ್ರದಲ್ಲೇನಿದೆ?

04:02 PM Nov 20, 2018 | Team Udayavani |

ಪುಣೆ: ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರ ಮೇಲೆ ನಡೆದ ದಾಳಿಯಲ್ಲಿ ಸಿಕ್ಕ ಪತ್ರದಲ್ಲಿ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಹೆಸರೂ ಉಲ್ಲೇಖವಾಗಿದೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ. 

Advertisement

ಐವರು ಹೋರಾಟಗಾರರನ್ನು ಪೊಲೀಸರು ಜೂನ್‌ನಲ್ಲಿ ಬಂಧಿಸಿದ್ದು, ಸೋಮವಾರ ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ ಶೀಟ್‌ನಲ್ಲಿ ಈ ವಿವರವಿದೆ. 2017 ಸೆ.25ರಂದು ಸುರೇಂದ್ರ ಗಡ್ಲಿಂಗ್‌ ಎಂಬಾತನಿಗೆ ನಕ್ಸಲ್‌ ಮುಖಂಡ ಪ್ರಕಾಶ್‌ ಬರೆದ ಪತ್ರ ಪೊಲೀಸರಿಗೆ ಸಿಕ್ಕಿದೆ. 

ಅದರಲ್ಲಿ ದಿಗ್ವಿಜಯ ಸಿಂಗ್‌ ಫೋನ್‌ ನಂಬರ್‌ ನಮೂದಿಸಲಾಗಿದೆ. ಅದನ್ನು ದಿಗ್ವಿಜಯ ಸಿಂಗ್‌ ನಿರಾಕರಿಸಿದ್ದು, ನಾನು ಅಪರಾಧಿಯಾಗಿದ್ದರೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ನನ್ನನ್ನು ಬಂಧಿಸಬಹುದು. ಯಾಕೆ ನನಗೆ ಈವರೆಗೂ ನೋಟಿಸ್‌ ಕೂಡ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next