Advertisement
ಸಂಚಾರ ನಿಯಮ ಉಲ್ಲಂ ಸಿದ ವಾಹನ ಸವಾರರಿಂದ ಪೊಲೀಸರು ಹಿಂದೆ ನಗದು ರೂಪದಲ್ಲಿ ದಂಡ ಸಂಗ್ರಹಿಸುತ್ತಿದ್ದರು. ಈ ರೀತಿ ಸಂಗ್ರಹವಾದ ಮೊತ್ತವನ್ನು ಸರ್ಕಾರದ ಖಜಾನೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂಲಕ ಜಮೆ ಮಾಡುತ್ತಿದ್ದರು.
Related Articles
Advertisement
ವ್ಯಾಪಕ ಪ್ರಚಾರ ಮಾಡಿದ್ದ ಪೊಲೀಸರು: ನಗರದ ಆಯ್ದ ಪ್ರದೇಶಗಳಲ್ಲಿ ಪಿಡಿಎ ಯಂತ್ರಗಳನ್ನು ಪರಿಚಯಿಸಿದ್ದ ಸಂಚಾರ ವಿಭಾಗದ ಪೊಲೀಸರು ಆ ಬಗ್ಗೆ ಪ್ರಚಾರವನ್ನೂ ಮಾಡಿದ್ದರು. ಇನ್ಮುಂದೆ ಸಂಚಾರ ನಿಯಮ ಉಲ್ಲಂ ಸುವವರು ತಕ್ಷಣಕ್ಕೆ ನಗದು ಇಲ್ಲದೇ ಹೋದಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ಮೂಲಕ ದಂಡ ಪಾವತಿಸಬಹುದು ಎಂದು ಹೇಳಿದ್ದರು.
ಆದರೆ, ಪೂರ್ವ ಸಿದ್ಧತೆ ಸಮಸ್ಯೆ ಯಿಂದಾಗಿ ಪಿಡಿಎ ಯಂತ್ರದ ಮೂಲಕ ದಂಡ ಸ್ವೀಕಾರ ಸಾಧ್ಯವಾಗುತ್ತಿಲ್ಲ. ಇದು ಕೆಲವೆಡೆ ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಜಗಳಕ್ಕೇ ಬರುತ್ತಿದ್ದಾರೆ ಜನ: ಅತ್ಯಾಧುನಿಕ ತಂತ್ರಜ್ಞಾನದ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್(ಪಿಡಿಎ)ನಲ್ಲಿ ಎಲ್ಲ ರೀತಿಯ ತಂತ್ರಜ್ಞಾನವಿದೆ. ಕಾರ್ಡ್ಗಳ ಬಳಕೆಗೆ ಅವಕಾಶವಿದ್ದರೂ ಸದ್ಯಕ್ಕೆ ಬಳಸಲಾಗುತ್ತಿಲ್ಲ. ಇದರಿಂದ ವಾಹನ ಸವಾರರು ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದಾರೆ. ಕಾರ್ಡ್ ಗಳ ಸ್ವೆ„ಪಿಂಗ್ಗೆ ಅವಕಾಶವಿದ್ದರೂ ಏಕೆ ಉಪಯೋಗಿಸುತ್ತಿಲ್ಲ ಎಂದು ಮರು ಪ್ರಶ್ನೆ ಕೇಳುತ್ತಾರೆ.
ಸಮಸ್ಯೆ ವಿವರಿಸಿದರೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪೊಲೀಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಸಂಚಾರ ಪೊಲೀಸರಿಗೆ ವಿತರಿಸಿರುವ ಪಿಡಿಎ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ದಂಡ ಸಂಗ್ರಹ ಸಾಧ್ಯವಾಗುತ್ತಿಲ್ಲ. 10-15 ದಿನಗಳಲ್ಲಿ ಎಲ್ಲವೂ ಬಗಹರಿಯಲಿದೆ.
* ಮೋಹನ್ ಭದ್ರಾವತಿ