Advertisement

Digital Arrest: ವರ್ಧಮಾನ್‌ ಗ್ರೂಪ್‌ ಮುಖ್ಯಸ್ಥನಿಗೆ 7 ಕೋಟಿ ರೂ. ವಂಚನೆ

10:07 PM Oct 01, 2024 | Team Udayavani |

ನವದೆಹಲಿ: ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್‌, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಭಯಗೊಳಿಸಿ ದುಡ್ಡು ಪೀಕುವ ದೊಡ್ಡ ಜಾಲವೇ ಹುಟ್ಟಿಕೊಂಡಿವೆ.

Advertisement

ಈಗ ವರ್ಧಮಾನ್‌ ಗ್ರೂಪ್‌ ಮುಖ್ಯಸ್ಥ ಎಸ್‌ ಪಿ ಓಸ್ವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಹೆಸರಲ್ಲಿ ಕರೆ ಮಾಡಿ ಬರೋಬ್ಬರಿ 7 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೋ ಕರೆ ಮಾಡಿರುವ ವಂಚಕರು ನಕಲಿ ವರ್ಚುವಲ್‌ ನ್ಯಾಯಾಲಯವನ್ನೇ ಸೃಷ್ಟಿಸಿ ನಂಬಿಸಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿರುವ ಅಕೌಂಟ್‌ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಹೆಸರಿಸಿದ್ದಲ್ಲದೆ, ಮನಿ ಲಾಂಡರಿಂಗ್‌ ತನಿಖೆಯಲ್ಲಿ ಕಳೆದ ವರ್ಷ ಬಂಧಿಸಲ್ಪಟ್ಟ ನರೇಶ್‌ ಗೋಯಲ್‌ ವಿರುದ್ಧದ ಪ್ರಕರಣದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡಿದೆ ಎಂದು ಹೆದರಿಸಲಾಗಿದೆ. ಈ ವೇಳೆ 7 ಕೋಟಿ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಸೈಬರ್‌ ಪೊಲೀಸರು ಈಗ 5.25 ಕೋಟಿ ರೂಪಾಯಿಯನ್ನು ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next