Advertisement

ಕಾಂಗ್ರೆಸ್‌-ಬಿಜೆಪಿಯಲ್ಲಿ ತಲೆದೋರಿದ ಭಿನ್ನ ಮತ

04:27 PM Aug 27, 2018 | Team Udayavani |

ಜಮಖಂಡಿ: ಕಳೆದ 2013ರ ನಗರಸಭೆ ಚುನಾವಣೆ ಸಂದರ್ಭದಲ್ಲಿದ್ದ ವಾತಾವರಣ ಸಂಪೂರ್ಣ ಬದಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ವಾತಾವರಣ ಶಮನಗೊಂಡಿಲ್ಲ. ಟಿಕೆಟ್‌ ವಂಚಿತ ಅಭ್ಯರ್ಥಿಗಳು ಕೆಲವೊಂದು ವಾರ್ಡ್‌ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರೇ, ಕೆಲ ಅಭ್ಯರ್ಥಿಗಳು ತಮ್ಮ ವಿರೋಧ ಪಕ್ಷದ ಅಭ್ಯರ್ಥಿಗೆ ಬೆಂಬಲವಾಗುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ನಾಯಕರಿಗೆ ಬಿಸಿ ಮುಟ್ಟಿಸುವ ತವಕದಲ್ಲಿದ್ದಾರೆ. 

Advertisement

2013ರ ನಗರಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ 12, ಬಿಜೆಪಿ 6, ಕೆಜೆಪಿ 4, ಬಿಎಸ್‌ ಆರ್‌ 4 ಹಾಗೂ 5 ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಮೂಲಕ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸದ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಿಎಸ್‌ಆರ್‌, ಪಕ್ಷೇತರ ಸ್ಥಾನದಿಂದ ಚುನಾಯಿತಗೊಂಡ ಸದಸ್ಯರು ಕಾಂಗ್ರೆಸ್‌ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ 5 ವರ್ಷ ನಗರಸಭೆ ಅಧಿಕಾರ ಪೂರ್ಣಗೊಳಿಸಿತು. ಅದರಲ್ಲಿ ಬಿಎಸ್‌ಆರ್‌ ಪಕ್ಷದ ಅಭ್ಯರ್ಥಿ ಹಸೀನಾ ಅವಟಿ, ಕಾಂಗ್ರೆಸ್‌ ಪಕ್ಷದ ರೇಷ್ಮಾ ಖಾದ್ರಿ ಹಾಗೂ ರಾಜು ಪಿಸಾಳ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರು.

ಪ್ರಸಕ್ತ ನಗರಸಭೆ 31 ವಾರ್ಡ್‌ಗಳಲ್ಲಿ 10 ಸ್ಥಾನಗಳಲ್ಲಿ ನೇರ ಸ್ಪರ್ಧೆ, 12 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪಧೆಯಿದ್ದರೇ, ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಕನಿಷ್ಠ 4 ರಿಂದ 7 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ನಗರಸಭೆ 31 ವಾರ್ಡ್‌ಗಳಿಗೆ 105 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಟಿಕೆಟ್‌ ವಂಚಿತಗೊಂಡ ಅಭ್ಯರ್ಥಿಗಳು ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಪಕ್ಷೇತರಾಗಿ ಸ್ಪ ರ್ಧಿಸಿದ್ದಾರೆ. 2013 ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ ಪಕ್ಷದ ರಾಜು ಪಿಸಾಳ, ರಹಿಮತಲ್ಲಾ ಚೌಧರಿ ಹಾಗೂ ಬಿಜೆಪಿಯಿಂದ ದಿಲೀಪ ಜೋಗದಂಡೆ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಾಗಿ ಸಿದ್ಧರಾಗಿದ್ದಾರೆ. ಉಳಿದ 28 ವಾರ್ಡ್‌ಗಳಲ್ಲಿ ಬಹುತೇಕ ಹೊಸ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ.

ಆ.31 ನಡೆಯುವ ಮತದಾನ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದು, 21 ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೇ, ಕನಿಷ್ಠ 10 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮಾನದಂಡದ ಮೂಲಕ ಗೆಲುವು ಪಡೆಯಲಿದ್ದಾರೆ. ಮತದಾರ ಮಾತ್ರ ನಿಗೂಢತೆ ಬಿಟ್ಟು ಕೊಡುತ್ತಿಲ್ಲ. ನಗರಸಭೆ 31 ವಾರ್ಡ್‌ಗಳಲ್ಲಿ 58 ಮತಗಟ್ಟೆಗಳು ನಿರ್ಮಾಣಗೊಂಡಿದ್ದು, ಅದರಲ್ಲಿ 12 ಅತೀ ಸೂಕ್ಷ್ಮ, 16 ಸೂಕ್ಷ್ಮ ಹಾಗೂ 30 ಸಾಮಾನ್ಯ ಮತಗಟ್ಟೆ ಗುರುತಿಸಲಾಗಿದೆ. 58 ಮತಗಟ್ಟೆಗಳಲ್ಲಿ 29275 ಪುರುಷ, 30180 ಮಹಿಳಾ ಹಾಗೂ 3 ಇತರೆ ಸಹಿತ 59,458 ಮತದಾರರು ಮತ ಚಲಾಯಿಸಲಿದ್ದಾರೆ.

ಬಿರುಸಿನ ಪ್ರಚಾರ: ನಗರಸಭೆ ಚುನಾವಣೆಗಳು ಘೋಷಣೆಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ಶಾಸಕ ಸಿದ್ದು ನ್ಯಾಮಗೌಡ ಅನುಪಸ್ಥಿತಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಾಡುತ್ತಿದ್ದು, ಶಾಸಕರ ಪುತ್ರರಾದ ಆನಂದ ಮತ್ತು ಬಸವರಾಜ ನ್ಯಾಮಗೌಡ ನೇತೃತ್ವದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಬ್ಲಾಕ್‌ ಕಮಿಟಿ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಸಹಿತ ಬಹುತೇಕ ಎಲ್ಲ ನಾಯಕರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಉಂಟಾಗಿದ್ದ ಅಸಮಾಧಾನ ಒಂದೆರೆಡು ಕಡೆ ಉಳಿದುಕೊಂಡಿದ್ದು, ಬಹುತೇಕ ಶಮನಗೊಳ್ಳಲಿದ್ದು ಇದರಿಂದ ಕಾಂಗ್ರೆಸ್‌ ಪಕ್ಷಗೆ ಮತ್ತಷ್ಟು ಶಕ್ತಿ ಬಂದಿದೆ.

Advertisement

ಬಿಜೆಪಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ನೇತೃತ್ವದಲ್ಲಿ 10ಕ್ಕೂ ತಂಡಗಳು ರಚನೆಗೊಂಡಿದ್ದು, ನಗರದ 31 ವಾರ್ಡ್‌ಗಳಲ್ಲಿ ಪಕ್ಷದ ವಿವಿಧ ಮುಖಂಡರು ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಹಂಚಿಕೆಯಲ್ಲಿ ಬಹಳಷ್ಟು ಅಭ್ಯರ್ಥಿಗಳು ಅಸಮಾಧಾನಗೊಂಡಿದ್ದು, ಸಮಾಧಾನಪಡಿಸುವ ನಿಟ್ಟಿನಲ್ಲಿ ಮುಖಂಡರು ಶ್ರಮಿಸುತ್ತಿದ್ದಾರೆ. ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ತಪ್ಪಿದ್ದು, ಸಮಾಧಾನಕ್ಕೆ ಪ್ರಮುಖ ಕಾರಣ ಆಗಿದೆ.

ಮಲ್ಲೇಶ ರಾ. ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next