Advertisement

“ವ್ಯಂಗ್ಯಚಿತ್ರ ರಚನೆ ಮುಂದುವರಿಸುವೆ’

06:45 AM Nov 07, 2017 | Team Udayavani |

ಚೆನ್ನೈ: “ನಾನು ವ್ಯಂಗ್ಯಚಿತ್ರ ಬರೆಯುವುದನ್ನು ಮುಂದುವರಿಸುವೆ. ಸರಕಾರದ ದೌರ್ಬಲ್ಯಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಮುಂದೆಯೂ ಎತ್ತಿಹಿಡಿಯುತ್ತೇನೆ’. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಮುಖ್ಯಸ್ಥರ ವ್ಯಂಗ್ಯಚಿತ್ರ ಬರೆದು ಬಂಧನಕ್ಕೊಳಕ್ಕಾಗಿ, ಸೋಮವಾರ ಜಾಮೀನಿನ ಮೇಲೆ ಹೊರಬಂದ ವ್ಯಂಗ್ಯಚಿತ್ರಕಾರ ಬಾಲಾ. ಜಿ ಹೇಳಿದ ಮಾತಿದು.

Advertisement

ಇತ್ತೀಚೆಗಷ್ಟೇ ಕುಟುಂಬವೊಂದು ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಘಟನೆಯ ಆಧಾರದಲ್ಲಿ ವ್ಯಂಗ್ಯಚಿತ್ರ ಬರೆದಿದ್ದ ಬಾಲು ಅವರು ಆಡಳಿತಯಂತ್ರವನ್ನು ಟೀಕಿಸಿದ್ದರು. ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ರವಿವಾರವಷ್ಟೇ ಅವರನ್ನು ಬಂಧಿಸಿಲಾಗಿತ್ತು. 
ಜಾಮೀನಿನ ಮೇಲೆ ಹೊರಬಂದು ಸುದ್ದಿಗಾರರ ಜತೆ ಮಾತನಾಡಿದ ಬಾಲಾ, “ನಾನೂ ಓರ್ವ ಪತ್ರಕರ್ತನೇ, ನಾನೇನು ಕೊಲೆ ಮಾಡಿಲ್ಲ. ನನಗೆ ಈ ವ್ಯಂಗ್ಯಚಿತ್ರ ಬರೆದಿರುವ ಕುರಿತು ಯಾವುದೇ ಪಶ್ಚಾತಾಪವಿಲ್ಲ. ಇನ್ನು ಮುಂದೆಯೂ ಸರಕಾರದ ಓರೆಕೋರೆಗಳನ್ನು ನಾನು ನನ್ನ ಚಿತ್ರಗಳ ಮೂಲಕ ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next