Advertisement

ಜೈನರು ಪ್ರತ್ಯೇಕವಾದಾಗ ಧರ್ಮ ಒಡೆಯಲಿಲ್ಲವೇ?

06:30 AM Mar 29, 2018 | |

ತುಮಕೂರು: ಬೌದ್ದರು, ಸಿಖ್‌ ರು, ಜೈನರು ಪ್ರತ್ಯೇಕವಾದಾಗ ಧರ್ಮ ಒಡೆಯಲಿಲ್ಲವೇ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್‌ ಶಾಗೆ ತಿರುಗೇಟು ನೀಡಿದ್ದಾರೆ.

Advertisement

ಸಿದ್ದಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಮಾಧ್ಯಮ
ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಲಿಂಗಾಯತ ಧರ್ಮ ಪ್ರತ್ಯೇಕವಾದರೆ ಮಾತ್ರ ಹಿಂದೂ ಧರ್ಮ ಒಡೆಯುತ್ತದೆ ಎನ್ನುತ್ತಿದ್ದಾರೆ. ಅಮಿತ್‌ ಶಾ ಅವರು ಜೈನ ಸಮುದಾಯಕ್ಕೆ ಸೇರಿದವರು. ಒಂದೇ ಧರ್ಮದಡಿಯಲ್ಲಿ ಜೈನ, ಬೌದ್ದ, ಸಿಖ್‌ ಸಮಾಜ ಗಳಿದ್ದವು.

ಅಂದು ಕೇಂದ್ರ ಸರ್ಕಾರ ಜೈನ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದಾಗ ಬೌದಟಛಿರು, ಸಿಖ್‌ ರು ಮತ್ತು ಜೈನರು ಪ್ರತ್ಯೇಕವಾದರು. ಆಗ ಧರ್ಮ ಒಡೆಯಲಿಲ್ಲವೇ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next