Advertisement

Shettar 6 ತಿಂಗಳಲ್ಲಿ ಎಲ್ಲ ಮರೆತರಾ?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

05:34 PM Jan 25, 2024 | Team Udayavani |

ಕಲಬುರಗಿ: ಆರು ತಿಂಗಳ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಬಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ಎಲ್ಲ ಮರೆತರಾ? ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

Advertisement

ಬಿಜೆಪಿ ನಿರ್ಲಕ್ಷಿಸಿದ್ದರಿಂದ ಚುನಾವಣೆ ಟಿಕೆಟ್ ಕೊಟ್ಟೆವು, ಸೋತ ನಂತರವೂ ಎಂಎಲ್ಸಿ ಮಾಡಿದೇವು. ಆದರೂ ಅವರೀಗ ಮೋದಿ ಕೈ ಬಲಪಡಿಸಲು ಬಿಜೆಪಿಗೆ ಸೇರಿದ್ದಾಗಿ ಹೇಳಿರುವುದನ್ನು ನೋಡಿದರೆ ಎಲ್ಲ ಮರೆತರಾ? ಎಂದು ಕೇಳಬೇಕಾಗುತ್ತದೆ ಎಂದರು.

ಯಾರು ಹೋಗುವವರು ಹೋಗಲಿ, ಬರೋರು ಬರಲಿ.ನಮ್ಮ ಪಾರ್ಟಿ ನಿಲ್ಲಲ್ಲ.ಯಾರೊ ಒಬ್ಬರಿಂದ ಪಾರ್ಟಿ ನಡೆಯೋದಿಲ್ಲ .‌ಇನ್ನೂ ನಾವು ಗ್ರೌಂಡ್ ಗೆ ಇಳಿದಿಲ್ಲ. ಮುಂದಿನ‌ ದಿನಗಳಲ್ಲಿ ನಮ್ಮ‌ಕಡೆ ಯಾರು ಬರ್ತಾರೆ ನೋಡಿ ಎಂದು ಚುಟುಕಾಗಿ ಹೇಳಿದರು.

ಬಿಜೆಪಿಯಲ್ಲಿ ನಾಯಕತ್ವ ಕೊರತೆಯಿದೆ. ಹೀಗಾಗಿ ಈ ರೀತಿ ಮಾಡ್ತಿದ್ದಾರೆ.‌ ಇದೇ ಕಾರಣಕ್ಕೆ ಜೆಡಿಎಸ್ ಜತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ. ಸಿಂಗಲ್ ಆಗಿ ಏಲೆಕ್ಷ‌ನ್ ಮಾಡಲಿ ನೋಡೋಣ.ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ‌ ಎಂದು ಸಚಿವ ಖರ್ಗೆ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next