Advertisement

Dharmasthala; ಕಾಡಿಗಟ್ಟಿದರೂ ಮತ್ತೆ ಬಂದ ಆನೆಗಳು!

02:41 PM Sep 14, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಕಂಡು ಬಂದಿದ್ದು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾಡಾನೆಗಳನ್ನು ಬುಧವಾರ ರಾತ್ರಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿತ್ತು. ಆದರೆ ಗುರುವಾರ ಬೆಳಗ್ಗೆ ಮತ್ತೆ ಕಾಣಸಿಕ್ಕಿದೆ.

Advertisement

ಬುಧವಾರ ರಾತ್ರಿ ಕಾಡಿಟ್ಟಿದ ಆನೆಗಳು ಇಂದು ಬೆಳಿಗ್ಗೆ ಮತ್ತೆ ಕಾಣಿಸಿಕೊಂಡಿದೆ. ಒಂದು ಮರಿ ಸೇರಿದಂತೆ ಮೂರು ಆನೆಗಳು ಇಂದು ಮತ್ತೆ ಪ್ರತ್ಯಕ್ಷವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:Honeytrap Case: ಹನಿಟ್ರ್ಯಾಪ್‌ ಮಾಸ್ಟರ್‌ ಮೈಂಡ್‌ ಕಳವು ಕೇಸಲ್ಲಿ ಬಂಧನ

ಮಂಗಳವಾರ ರಾತ್ರಿ 11ರ ಸುಮಾರಿಗೆ ಕಾಡಾನೆಗಳು ತೋಟಕ್ಕೆ ನುಗ್ಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಡಿಆರ್‌ಎಫ್‌ಒ ಹರಿಪ್ರಸಾದ್‌, ರಾಜೇಶ್‌ ಗಸ್ತು ಅರಣ್ಯ ಪಾಲಕರಾದ ಸಂತೋಷ, ಸದಾನಂದ ಆಗಮಿಸಿ ಸ್ಥಳೀಯರ ಸಹಕಾರದಲ್ಲಿ ಆನೆಗಳನ್ನು ಕಾಡಿಗೆ ಅಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next