Advertisement

Dharmasthala ಡಾ| ಡಿ. ವೀರೇಂದ್ರ ಹೆಗ್ಗಡೆ 76ನೇ ವರ್ಷಕ್ಕೆ ಪಾದಾರ್ಪಣೆ

11:49 PM Nov 25, 2023 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು 75 ವರ್ಷಗಳನ್ನು ಪೂರೈಸಿ 76ನೇ ವರ್ಷಕ್ಕೆ ಕಾಲಿಟ್ಟಿದ್ದು, ಶನಿವಾರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಭಕ್ತಿಪೂರ್ವಕ ಶುಭಾಶಯ ಸಲ್ಲಿಸಿದರು.

Advertisement

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಎಸ್‌. ಸತೀಶ್ಚಂದ್ರ, ನಾಟೆಕಲ್‌ ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಅಧ್ಯಕ್ಷ ಯು.ಕೆ. ಮೋನು, ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯ ಸಿಬಿಒ ಗೋಕುಲ್‌ದಾಸ್‌ ಪೈ, ಶಾಲಿನಿ ಜಿ. ಪೈ, ವಲಯ ಕಚೇರಿ ಡಿಜಿಎಂ ವಸಂತ್‌ ಹೆರ್ಲೆ, ಪುತ್ತೂರು ಕ್ಲಸ್ಟರ್‌ ಹೆಡ್‌ ಚೀಫ್‌ ಮ್ಯಾನೇಜರ್‌ ಶ್ರೀಹರಿ, ಉಜಿರೆ ಶಾಖೆಯ ಮ್ಯಾನೇಜರ್‌ ವಿನಾಯಕ ಪ್ರಭು, ಪೆರಿಂಜೆ ಶ್ರೀ ಪದ್ಮ ಕ್ಯಾಶ್ಯೂ ಇಂಡಸ್ಟ್ರೀಸ್‌ನ ವಿಕಾಸ್‌ ಜೈನ್‌, ಪೆರಿಂಜೆ ಅರಿಹಂತ್‌ ಇಂಡಸ್ಟ್ರೀಸ್‌ನ ವಿಶ್ವಾಸ್‌ ಜೈನ್‌ ಮೊದಲಾದ ಗಣ್ಯರು ಶುಭಾಶಯ ಸಲ್ಲಿಸಿದರು.

ಡಾ| ಹೆಗ್ಗಡೆಯವರ ಕುಟುಂಬದ ಸದಸ್ಯರು, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗ, ದೇವಸ್ಥಾನದ ವಿವಿಧ ವಿಭಾಗಗಳ ಮುಖ್ಯಸ್ಥರು, ರುಡ್‌ಸೆಟ್‌ ಸಿಬಂದಿ ವರ್ಗ, ಕ್ಷೇತ್ರದ ವಿವಿಧ ಸಂಸ್ಥೆಗಳ ನೌಕರರು ಸೇರಿದಂತೆ ಸರ್ವರು ಹೆಗ್ಗಡೆಯವರನ್ನು ಗೌರವಿಸಿದರು.

ಶನಿವಾರ ಸಂಜೆಯ ಹೊತ್ತು ಹೆಗ್ಗಡೆಯವರ ಕುಟುಂಬದ ಸದ ಸ್ಯರು, ಹಿರಿಯ ಸಿಬಂದಿ ಸೇರಿ ಹಿಂದಿನ ಘಟನೆಗಳನ್ನು ಮೆಲುಕು ಹಾಕುವ ಸಮ್ಮಿಲನ ಕಾರ್ಯಕ್ರಮ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next