Advertisement

ರೈತ ಸಂಘಕ್ಕೆ ದೇವಿಂದ್ರಪ್ಪ ಗೌಡ ನೇಮಕ

02:39 PM Jan 15, 2022 | Team Udayavani |

ಶಹಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಕಾರ್ಯದರ್ಶಿಯಾಗಿ ದೇವಿಂದ್ರಪ್ಪಗೌಡ ಪೋಲಿಸ್‌ ಪಾಟೀಲ್‌ ಅವರನ್ನು ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮತ್ತು ರಾಜ್ಯ ಸಂಚಾಲಕರ ಸೂಚನೆ ಮೇರೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಹೇಶಗೌಡ ಸುಬೇದಾರ ತಿಳಿಸಿದರು.

Advertisement

ನೂತನ ಜಿಲ್ಲಾ ಕಾರ್ಯದರ್ಶಿ ದೇವಿಂದ್ರಪ್ಪಗೌಡ ಅವರಿಗೆ ಆದೇಶ ಪತ್ರ ನೀಡಿ ಮಾತನಾಡಿದ ಅವರು, ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಅವಿರತ ಶ್ರಮವಹಿಸಬೇಕು. ಸಂಘಟನೆ ಬಲಪಡಿಸಬೇಕು. ರಾಜ್ಯಕ್ಕೆ, ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿ ಹೋರಾಡುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ರೈತರ ಶ್ರೇಯೋಭಿವೃದ್ಧಿಗೆ ಸ್ಫೂರ್ತಿದಾಯಕ ಕೆಲಸ, ಕಾರ್ಯಕ್ರಮ ಆಯೋಜಿಸುವ ಮೂಲಕ ಕೃಷಿ ಉತ್ತೇಜನಕಾರಿ ಕಾರ್ಯಕ್ರಮ ಮಾಡಬೇಕೆಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಹುಣಸಗಿ, ವಡಿಗೇರಾ, ಯಾದಗಿರಿ ಸೇರಿದಂತೆ ನೂತನ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಸಹ ನೇಮಿಸಿ ಆದೇಶಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದರು. ಜಿಲ್ಲಾ ಉಪಾಧ್ಯಕ್ಷ ದೇವರಾಜ ಗೌಡಗೇರಿ, ಶಹಾಪುರ ತಾಲೂಕು ಅಧ್ಯಕ್ಷ ಚಂದನಗೌಡ ಮಾಲಿಪಾಟೀಲ್‌, ಬಸನಗೌಡ ಬೀರನೂರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next