Advertisement

“ರಂಗಭೂಮಿ ಕಲಾವಿದನನ್ನು ಬೆಳೆಸುತ್ತದೆ’

06:30 AM Aug 24, 2017 | Team Udayavani |

ಬಂಟ್ವಾಳ: ರಂಗಭೂಮಿ ಎನ್ನುವುದು ಕಲಾವಿದನನ್ನು ಇದ್ದ ಹಾಗೆಯೇ ತೋರಿಸುವುದು. ಒಬ್ಬ ಕಲಾವಿದ ತನ್ನನ್ನು ತಾನು ತಿದ್ದಿಕೊಳ್ಳಲು ರಂಗಭೂಮಿ ಒಂದು ಉತ್ತಮ ವೇದಿಕೆ ಎಂದು ಮಹೇಶ್‌ ಕಾಲೇಜಿನ ಉಪನ್ಯಾಸಕ, ಯಕ್ಷಗಾನ ಕಲಾವಿದ ಸುನಿಲ್‌ ಪಲ್ಲಮಜಲು ಹೇಳಿದರು.
 
ಅವರು  ಆ. 21ರಂದು ಬಂಟ್ವಾಳ ಎಸ್‌.ವಿ.ಎಸ್‌. ಪ. ಪೂ. ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು. ಎಲ್ಲ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣ ವಾಗಿ ಒಂದಲ್ಲ ಒಂದು ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದವರು ತಿಳಿಸಿದರು. 

ಲಲಿತ ಕಲಾ ಸಂಘದ ಅಧ್ಯಕ್ಷೆ ಶಾಲಿನಿ  ಅತಿಥಿಗಳನ್ನು ಪರಿಚಯಿಸಿದರು.ವಿದ್ಯಾರ್ಥಿನಿ ಪಲ್ಲವಿ ಪೂಜಾರಿ,  ಗೋಪಾಲ್‌ ಸ್ವಾಗತಿಸಿ, ಪ್ರತೀಕ್ಷಾ ಬಿ. ವಂದಿಸಿದರು. ಗ್ರೆನಿಷಾ ಸುಷ್ಮಾ ವೇಗಸ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next