Advertisement

ದೇವಧರ್‌ ಟ್ರೋಫಿ: ಕರ್ನಾಟಕಕ್ಕೆ ಜಯ

07:30 AM Mar 06, 2018 | |

ಧರ್ಮಶಾಲಾ: ದೇವಧರ್‌ ಟ್ರೋಫಿ ಕ್ರಿಕೆಟ್‌ನ ರೋಚಕ ಮುಖಾಮುಖಿಯಲ್ಲಿ ಕರ್ನಾಟಕ 6 ರನ್ನುಗಳಿಂದ ಇಂಡಿಯಾ ಬಿ ತಂಡವನ್ನು ಸೋಲಿಸಿದೆ. 

Advertisement

ಕರ್ನಾಟಕ ಆರ್‌. ಸಮರ್ಥ್ ಅವರ ಶತಕ ಸಾಹಸದಿಂದ (117) 8 ವಿಕೆಟಿಗೆ 296 ರನ್‌ ಪೇರಿಸಿದರೆ, ಇಂಡಿಯಾ ಬಿ 50 ಓವರ್‌ಗಳಲ್ಲಿ 9 ವಿಕೆಟಿಗೆ 290ರ ತನಕ ಬಂದು ಶರಣಾಯಿತು. ಇಂಡಿಯಾ ಬಿ ಪರ ಮನೋಜ್‌ ತಿವಾರಿ 120 ರನ್‌, ಸಿದ್ದೇಶ್‌ ಲಾಡ್‌ 70 ರನ್‌ ಹೊಡೆದರು. ಇವರು 4ನೇ ವಿಕೆಟಿಗೆ 218 ರನ್‌ ಜತೆಯಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಶ್ರೇಯಸ್‌ ಗೋಪಾಲ್‌ ಸತತ 2 ಎಸೆತಗಳಲ್ಲಿ ತಿವಾರಿ ಮತ್ತು ಜಯಂತ್‌ ಯಾದವ್‌ (0) ವಿಕೆಟ್‌ ಕಿತ್ತು ಪಂದ್ಯಕ್ಕೆ ತಿರುವು ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next