Advertisement

Devanahalli: ಸರಣಿ ಅಪಘಾತ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

10:16 PM Jul 25, 2023 | Team Udayavani |

ದೇವನಹಳ್ಳಿ: ಪಟ್ಟಣದ ಬೈಪಾಸ್ ಸರ್ಕಲ್ ನ ಬಳಿ ಲಾರಿ ಡಿಕ್ಕಿ ಗೆ ನಾಲ್ಕು ವಾಹನ ಜಖಂ ಆಗಿರುವ ಘಟನೆ ನಡೆದಿದೆ.

Advertisement

ಸಿಗ್ನಲ್ ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂದಿನಿಂದ ಬಂದು ಗುದ್ದಿದ ಲಾರಿಯಾಗಿದೆ. ಬೈಪಾಸ್ ಸರ್ಕಲ್ ಬಳಿ ತಪ್ಪಿದ ಭಾರಿ ಅನಾಹುತವಾಗಿದೆ. ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಅಪಘಾತಕ್ಕೆ ಕಾರಣವಾದ ಆಂಧ್ರದ ಲೇಪಾಕ್ಷಿ ಪ್ರದೇಶಕ್ಕೆ ಸೇರಿದ ಲಾರಿ ಆಗಿದೆ. ಲಾರಿ ಸಮೇತ ಚಾಲಕ ಮೂರ್ತಿ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತದಲ್ಲಿ ಕ್ರೇಟಾ, ಬ್ರೆಜ, ಟಾಟಾ ಗೂಡ್ಸ್ ವಾಹನ ಒಂದು ಗೂಡ್ಸ್ ಅಪ್ಪೆ ಸೇರಿ ಮೂರು ವಾಹನ ಜಖಂ ಆಗಿದೆ.

ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಗಾಯಾಳುಗಳಾದ ಟಾಟಾ ಏಸ್ ಮತ್ತು ಅಪ್ಪೆ ವಾಹನದಲ್ಲಿದ್ದ ರವಿಕುಮಾರ್ ಮತ್ತು ಧರ್ಮೇಂದರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಬೆಂಗಳೂರು ಕಡೆಯಿಂದ ದೇವನಹಳ್ಳಿ ಚಿಕ್ಕಬಳ್ಳಾಪುರ ಕಡೆ ಮುಖ ಮಾಡಿ ನಿಂತಿದ್ದ ವಾಹನ ಸಿಗ್ನಲ್ ಬಿದ್ದಿದೆ  ಎನ್ನುವುದನ್ನು ಲೆಕ್ಕಿಸದೆ ಸರಣಿ ಅಪಘಾತ ಲಾರಿ ಚಾಲಕನಾಗಿದ್ದಾನೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next