Advertisement

ನಮಗೆ ಶಾಂತಿ ಮೊದಲು, ಅನಿವಾರ್ಯವಾದ್ರೆ ಯುದ್ಧ

06:15 AM Oct 09, 2017 | |

ಹಿಂಡಾನ್‌(ಉ.ಪ್ರ): ಉತ್ತರ ಪ್ರದೇಶದಲ್ಲಿ ಗಡಿ ಭದ್ರತೆಗೆ ಸಂಬಂಧಿಸಿ ರವಿವಾರ ಮಾತನಾಡಿರುವ ಏರ್‌ ಚೀಫ್ ಮಾರ್ಷಲ್‌ ಬಿ.ಎಸ್‌. ಧನೋವಾ, “”ನಾವು ನೆರೆ ರಾಷ್ಟ್ರಗಳ ಜತೆ ಶಾಂತಿ ಬಯಸುತ್ತೇವೆ. ಆದರೆ, ಅನಿವಾರ್ಯ ಪರಿಸ್ಥಿತಿ ಎದುರಾದಾಗ ಸಣ್ಣದೊಂದು ಸೂಚನೆ ಸಿಕ್ಕರೂ ಯುದ್ಧಕ್ಕೆ ಸಿದ್ಧ” ಎಂದು ಹೇಳುವ ಮೂಲಕ ಮತ್ತೂಮ್ಮೆ ಸೈನ್ಯದ ಸಾಮರ್ಥ್ಯವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

Advertisement

“ಯಾವುದೇ ದೇಶದ ಯಾವುದೇ ಸವಾಲನ್ನು ಎದುರಿಸಲು ಸೈನ್ಯ ತಯಾರಿದೆ. ಯಾವುದೇ ಕ್ಷಣದಲ್ಲಿ ಯುದ್ಧವನ್ನು ಎದುರಿಸಲು ಸಿದ್ಧ. ಅಷ್ಟೇ ಅಲ್ಲ, ಸೂಕ್ತರೀತಿಯಲ್ಲೇ ಎದಿರೇಟು ನೀಡುತ್ತೇವೆ” ಎಂದಿದ್ದಾರೆ. ಭಾರತೀಯ ವಾಯುಪಡೆಯ 85ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ಅನಿಶ್ಚಿತತೆಯನ್ನು ಇಂದಿನ ಸಂದರ್ಭದಲ್ಲಿ ಭೌಗೋಳಿಕ ಸವಾಲುಗಳ ಕಾರಣಕ್ಕಾಗಿಯೂ ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ದೇಶದ ಭದ್ರತೆ ದೃಷ್ಟಿಯಿಂದ ಯಾವ ಸಂದರ್ಭದಲ್ಲಿಯೂ ಸೇನೆ ಎಂಥದೇ ಸವಾಲು ಎದುರಿಸಲು ಸಜ್ಜಾಗಿರಬೇಕಾಗುತ್ತದೆ” ಎಂದಿದ್ದಾರೆ.

ಡೋಕ್ಲಾಂನಲ್ಲಿ ಚೀನ ಸೇನೆ ಇನ್ನೂ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಹಾಗೂ ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ತಗಾದೆ ತೆಗೆಯುತ್ತಲೇ ಇರುವ ಹಿನ್ನೆಲೆಯಲ್ಲಿ ಅವರು ಮಾತನಾಡಿರುವುದು ಸ್ಪಷ್ಟವಾಗಿದೆ. ಆದರೆ ಎಲ್ಲಿಯೂ ಚೀನ ಅಥವಾ ಪಾಕ್‌ ಅನ್ನೇ ನೇರ ಗುರಿಯಾಗಿಸಿಕೊಂಡು ಮಾತನಾಡುತ್ತಿರುವುದಾಗಿ ಹೇಳಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next