Advertisement
ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ (KNRI)ನ ಅಧ್ಯಕ್ಷರಾದಂತಹ ಪ್ರವೀಣ್ ಕುಮಾರ್ ಶೆಟ್ಟಿ , ವೀನಸ್ ಗ್ರೂಪ್ ಹೊಟೇಲ್ಸ್ ನ ಮಾಲಕರಾದ ಪುತ್ತಿಗೆ ವಾಸುದೇವ ಭಟ್, ಭೀಮ ಜ್ಯೂವೆಲ್ಲರ್ಸ್ನ ಮಾಲಕರಾದ ನಾಗರಾಜ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಘದ ಸಂಚಾಲಕರಾದ ಸುಧಾಕರ ಪೇಜಾವರ ಅವರು ಎಲ್ಲರನ್ನು ಸ್ವಾಗತಿಸಿ, ಯುಎಇ ಬ್ರಾಹ್ಮಣ ಸಮಾಜವು
20 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಮಾಜದ ಸಾಧನೆ, ಉದ್ದೇಶ ಹಾಗೂ ಕಾರ್ಯ ವೈಖರಿಯ ಬಗ್ಗೆ ವಿವರಿಸಿದರು.
ಭೀಮ ಜ್ಯೂವೆಲ್ಲರ್ಸ್ನ ನಾಗರಾಜ ರಾವ್ ಅವರು ಕೂಡ ಭಟ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಮಟ್ಟಾರು ರತ್ನಾಕರ ಹೆಗ್ಡೆ ಅವರು ಮಾತನಾಡುತ್ತ ರಘುಪತಿ ಭಟ್ ಉಡುಪಿ ಜಿಲ್ಲೆಯಾದ್ಯಂತ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು, ಸಮಾಜದ ಏಳಿಗೆಗಾಗಿ ಕೈಗೊಂಡಂತಹ ಕಾರ್ಯಗಳು ಅವರ ಶೈಕ್ಷಣಿಕ ಸೇವೆ , ಸಾರಿಗೆ ಮತ್ತು ಇತರ ಕ್ಷೇತ್ರಗಳಲ್ಲಿ ಅವರು ಪಡೆದ ಯಶಸ್ಸುಗಳ ಬಗ್ಗೆ ಮಾತನಾಡಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ರಘುಪತಿ ಭಟ್, ವಿವಿಧ ಕ್ಷೇತ್ರದಲ್ಲಿ ಅನಿವಾಸಿಗಳು ಸಾಧನೆ ಮಾಡುತ್ತಿರುವುದನ್ನು ಶ್ಲಾ ಸಿದರು. ಅವರ ರಾಜಕೀಯ ಗುರುಗಳಾದ ದಿ| ವಿ .ಎಸ್ .ಆಚಾರ್ಯ ಅವರ ಮಾತು, ಧಾರ್ಮಿಕ ಗುರುಗಳಾದ ಪೇಜಾವರದ ಹಿಂದಿನ ಸ್ವಾಮಿಗಳು ಹಾಕಿಕೊಟ್ಟ ಸನ್ಮಾರ್ಗಲ್ಲಿ ನಡೆದು ಬಂದಿದಕ್ಕೆ ಇಷ್ಟೊಂದು ಜನರ ಪ್ರೀತಿ ಮತ್ತು ಹುದ್ದೆಗಳು ದೊರಕಿರುವುದೆಂದು ತಿಳಿಸಿದರು.
Related Articles
Advertisement