Advertisement

Desi Swara: ದುಬೈ -ಪ್ರಶಸ್ತಿ ವಿಜೇತರಿಗೆ ಸಮ್ಮಾನ

12:29 PM Jan 27, 2024 | Team Udayavani |

ದುಬೈ:ದುಬೈಯಲ್ಲಿ ಅಂತಾರಾಷ್ಟ್ರೀಯ ಪತ್ರಿಕಾ ಸಾಧಕ ಪ್ರಶಸ್ತಿ ಪಡೆದ ಪತ್ರಕರ್ತ, ಲೇಖಕ ರವಿ ನಾಯ್ಕಪು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಪತ್ರಕರ್ತರಾದ ಗಂಗಾಧರ ತೆಕ್ಕೆಮೂಲೆ ಮತ್ತು ಪುರುಷೋತ್ತಮ ಪೆರ್ಲ ಅವರನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರ) ಯು. ಎ. ಇ ದುಬೈ ಘಟಕದ ವತಿಯಿಂದ ಶಾಲು ಹೊದಿಸಿ ಸಮ್ಮಾನಿಸಲಾಯಿತು.

Advertisement

ಸಮಾರಂಭದಲ್ಲಿ ಅಕಾಡೆಮಿಯ ಯು.ಎ.ಇ ಘಟಕದ ಪ್ರಧಾನ ಕಾರ್ಯದರ್ಶಿ ಅಮರ್‌ದೀಪ್‌ ಕಲ್ಲೂರಾಯ ಅವರು ಶಾಲು ಹೊದಿಸಿ ಉಪಹಾರ ನೀಡಿ ಗೌರವಿಸಿದರು. ಅಕಾಡೆಮಿಯ ಮಾಧ್ಯಮ ವಿಭಾಗ ಸಂಚಾಲಕ ವಿಜಯ ಕುಮಾರ್‌ ಶೆಟ್ಟಿ ಗಾಣದಮೂಲೆ ಮಜಿಬೈಲ್‌ ಹಾಗೂ ಘಟಕದ ಪದಾಧಿಕಾರಿ ದುಬೈ ಉದ್ಯೋಗಿ, ಸಮಾಜ ಸೇವಕ ಲಿತೇಶ್‌ ಕುಮಾರ್‌ ಕೆ. ಸಿ. ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next