Advertisement

ಚಿತ್ರದುರ್ಗ: ಚುನಾವಣೆಗಳಲ್ಲಿ ಒಬ್ಬೊಬ್ಬ ನಾಯಕರದ್ದು ಒಂದೊಂದು ನಂಬಿಕೆಯಿರುತ್ತದೆ. ಆ ನಂಬಿಕೆ ಗೆಲುವಿನ ಗುಟ್ಟಾಗಿರುತ್ತದೆ. ಇಂಥದ್ದೇ ಒಂದು ನಂಬಿಕೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಎಚ್‌.ತಿಪ್ಪಾರೆಡ್ಡಿ ರಾಜಕೀಯ ಜೀವನದಲ್ಲೂ ಇದೆ.

Advertisement

ಅದೇ ರೀತಿಯಲ್ಲಿ ಜಿ.ಎಚ್‌.ತಿಪ್ಪಾರೆಡ್ಡಿ ಪ್ರತಿ ಚುನಾವಣೆ ಯಲ್ಲೂ ಒಂದು ಮುಸ್ಲಿಂ ಕುಟುಂಬದಿಂದ ಠೇವಣಿ ಕಟ್ಟಿಸಿಕೊಳ್ಳುತ್ತಾರೆ.

ತಿಪ್ಪಾರೆಡ್ಡಿ ಎದುರಿಸಿರುವ ಕಳೆದ 6 ಚುನಾವಣೆಗಳಿಗೂ ಟಿಎಂಕೆ ಫ್ಯಾಮಿಲಿಯ ಮಹಮ್ಮದ್‌ ಜಕ್ರಿಯಾ ಅವರೇ ಮೊದಲ ಚುನಾವಣೆಯಿಂದ ಇಂದಿನ ಚುನಾವಣೆವರೆಗೆ ಠೇವಣಿ ಕಟ್ಟುತ್ತಿದ್ದಾರೆ.

ಕಳೆದ 35 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಜಿ.ಎಚ್‌.ತಿಪ್ಪಾರೆಡ್ಡಿ ಸತತ 6 ಚುನಾವಣೆಗಳನ್ನು ಎದುರಿಸಿದ್ದು, ಒಮ್ಮೆ ಮಾತ್ರ ಸೋತಿದ್ದಾರೆ. ಈಗ ತಿಪ್ಪಾರೆಡ್ಡಿ ಎದುರಿಸುತ್ತಿರುವುದು ಸತತ ಏಳನೇ ಚುನಾವಣೆ. ಈ ಚುನಾವಣೆಗೂ ಸೂಚಕರಾಗಿ ಆಗಮಿಸಿದ್ದ ಮಹಮ್ಮದ್‌ ಜಕ್ರಿಯಾ ಅವರು ಠೇವಣಿಯೊಂದಿಗೆ ಬಂದಿದ್ದರು. ಆದರೆ, ಮೊದಲೇ ಒಂದು ಸೆಟ್‌ ನಾಮಪತ್ರ ಸಲ್ಲಿಸಿದ್ದ ಜಿ.ಎಚ್‌.ತಿಪ್ಪಾರೆಡ್ಡಿ, ಠೇವಣಿ ಹಣವನ್ನು ಚುನಾವಣಾ ಆಯೋಗಕ್ಕೆ ತುಂಬಿದ್ದರು.

ಈ ಬಗ್ಗೆ ಉದಯವಾಣಿ’ ಜತೆ ಮಾತನಾಡಿದ ಮಹಮ್ಮದ್‌ ಜಕ್ರಿಯಾ ಸಾಬ್‌, ತಿಪ್ಪಾರೆಡ್ಡಿ ಅವರ ಮೊದಲ ಚುನಾವಣೆಯಿಂದಲೂ ನಾವು ಸೂಚಕರು ಹಾಗೂ ಠೇವಣಿ ಕಟ್ಟುತ್ತೇವೆ. ಈ ಚುನಾವಣೆಗೆ ಅವರು ಮೊದಲೇ ಹಣ ತುಂಬಿದ್ದರೂ ಈಗ ತಂದಿರುವ ಹಣ ಅವರಿಗೆ ಸೇರಬೇಕು ಎಂದರು.

Advertisement

ಟಿಎಂಕೆ ಫ್ಯಾಮಿಲಿ ಅಂದ್ರೆ ತುರುವನೂರು ಮಹಮ್ಮದ್‌ ಖಾಸೀಂ ಎಂದರ್ಥ. ಜಿ.ಎಚ್‌. ತಿಪ್ಪಾರೆಡ್ಡಿ ಅವರ ಮೂಲ ತುರುವನೂರು ಗ್ರಾಪಂ ವ್ಯಾಪ್ತಿಯ ಕಡಬನಕಟ್ಟೆ. ಇವರದ್ದು ಜಿಎಚ್‌ಆರ್‌ ಫ್ಯಾಮಿಲಿ. ಅಲ್ಲಿಂದ ಈ ಎರಡೂ ಕುಟುಂಬಗಳ ಹಿರಿಯರು ಒಟ್ಟಿಗೆ ಚಿತ್ರದುರ್ಗಕ್ಕೆ ಬಂದು ನೆಲೆಸಿ ವ್ಯವಹಾರ ಶುರು ಮಾಡುತ್ತಾರೆ. ಹಿಂದಿನ ತಲೆಮಾರಿನಿಂದಲೂ ಎರಡೂ ಕುಟುಂಬಗಳ ನಡುವೆ ಅಣ್ಣ-ತಮ್ಮಂದಿರ ವಿಶ್ವಾಸವಿದೆ.

ಜಿ.ಎಚ್‌.ತಿಪ್ಪಾರೆಡ್ಡಿ ಅವರ 7 ಚುನಾವಣೆಗ ಳಿಗೂ ಸೂಚಕರಾಗಿದ್ದೇವೆ. ಪ್ರತಿ ಸಲವೂ ಡಿಪಾಸಿಟ್‌ ಕಟ್ಟುತ್ತಿದ್ದೇವೆ. ಎರಡೂ ಕುಟುಂಬಗಳು ಒಂದೇ ಮನೆಯವರಂತೆ ಇದ್ದೇವೆ. ಹಾಗಾಗಿ ಆ ಸ್ನೇಹ ಹಾಗೇ ಉಳಿದುಕೊಂಡು ಬಂದಿದೆ. ಮಹಮ್ಮದ್‌ ಜಕ್ರಿಯಾ ಸಾಬ್‌

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next