Advertisement

Mangaluru; ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಗಡೀಪಾರು: ಬಜರಂಗದಳ ಆರೋಪ

10:28 PM Apr 05, 2024 | Team Udayavani |

ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ಗಡೀಪಾರು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಬಜರಂಗದಳ ಆರೋಪಿಸಿದೆ.

Advertisement

ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್‌ ಕುಮುಡೇಲ್‌ ಹಲವಾರು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ಧರ್ಮರಕ್ಷಣೆ, ಗೋಸಂರಕ್ಷಣೆ, ಮಾತೆಯರ ರಕ್ಷಣೆಗಾಗಿ, ಡ್ರಗ್ಸ್‌ ವಿರುದ್ಧ ಕೆಲಸ ಮಾಡುತ್ತಿದ್ದರು. ರಾಜಕೀಯ ದ್ವೇಷದಿಂದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಸರಕಾರ ಷಡ್ಯಂತ್ರ ರೂಪಿಸಿ ಅವರಿಗೆ ಗ‌ಡೀಪಾರು ನೋಟಿಸ್‌ ನೀಡಿದೆ. ರಾಜ್ಯ ಸರಕಾರದ ಈ ಹಿಂದೂ ವಿರೋಧಿ ನೀತಿ ಖಂಡನೀಯ.

ಕಾಂಗ್ರೆಸ್‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಆಶ್ವಾಸನೆ ನೀಡಿ ಅಲ್ಪಸಂಖ್ಯಾಕರ ಮತ ಗಳಿಸಿದೆ. ಈ ಚುನಾವಣೆಯಲ್ಲಿಯೂ ಅದೇ ದಾರಿಯನ್ನು ಅನುಸರಿಸುತ್ತಿದ್ದು ಅಲ್ಪಸಂಖ್ಯಾಕರ ಓಲೈಕೆಗೋಸ್ಕರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿದೆ. ಕಾಂಗ್ರೆಸ್‌ ಸರಕಾರ ಈ ರೀತಿ ಗ‌ಡೀಪಾರು ಮಾಡುವ ಮೂಲಕ ಬಜರಂಗದಳ ಕಾರ್ಯಕರ್ತರನ್ನು ಧಮನಿಸಬಹುದೆಂದು ಅಂದು ಕೊಂಡಿದ್ದರೆ ಅದು ಭ್ರಮೆ. ಬಜರಂಗದಳ ಯಾವುದೇ ದ್ವೇಷ ರಾಜಕಾರಣದ ಅಸ್ತ್ರಕ್ಕೆ ಹೆದರುವುದಿಲ್ಲ. ಧರ್ಮ, ರಾಷ್ಟ್ರದ ಕೆಲಸಕ್ಕೆ ಬಜರಂಗದಳ ಕಾರ್ಯಕರ್ತರು ಕಟಿಬದ್ಧ. ಹಾಗಾಗಿ ಗ‌ಡೀಪಾರು ನೋಟೀಸನ್ನು ಹಿಂಪಡೆಯಬೇಕು ಎಂದು ಬಜರಂಗದಳ ವಿಭಾಗ ಸಂಯೋಜಕ ಪುನೀತ್‌ ಅತ್ತಾವರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next