Advertisement

Ayodhya: ಏರ್‌ಪೋರ್ಟ್‌ಗೆ ಸಿಐಎಸ್‌ಎಫ್ ಸಿಬಂದಿ ನಿಯೋಜನೆ

01:25 AM Jan 11, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಕೆಲವು ದಿನಗಳ ಹಿಂದೆ ಲೋಕಾರ್ಪಣೆಗೊಂಡ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಗೆ 150ಕ್ಕೂ ಹೆಚ್ಚು ಕೇಂದ್ರ ಕೈಗಾರಿಕ ಭದ್ರತಾ ಪಡೆಯ(ಸಿಐಎಸ್‌ಎಫ್) ಸಿಬಂದಿ ನಿಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.

Advertisement

ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಪಡೆಯ ವ್ಯಾಪ್ತಿಗೆ ಬರುವ ದೇಶದ 68ನೇ ನಾಗರಿಕ ವಿಮಾನ ನಿಲ್ದಾಣ ಆಗಿದೆ. ಸಿಐಎಸ್‌ಎಫ್, ವಿಮಾನ ನಿಲ್ದಾಣಕ್ಕೆ ಭಯೋತ್ಪಾದನೆ ವಿರೋಧಿ ಮತ್ತು ವಿಧ್ವಂಸಕ ವಿರೋಧಿ ರಕ್ಷಣೆಯನ್ನು ನೀಡಲಿದೆ. ಡಿಪ್ಯೂಟಿ ಕಮಾಂಡೆಂಟ್‌ ರ್‍ಯಾಂಕಿನ ಅಧಿಕಾರಿಯ ಅಡಿಯಲ್ಲಿ 150ಕ್ಕೂ ಹೆಚ್ಚು ಸಿಐಎಸ್‌ಎಫ್ ಸಿಬಂದಿ ಕೆಲಸ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next