Advertisement

ಕಲಬುರಗಿಯಲ್ಲಿ 35 ಜನರಿಗೆ ಡೆಂಘೀ!

02:40 PM Jun 25, 2017 | |

ಕಲಬುರಗಿ: ಮತ್ತೆ ಜಿಲ್ಲೆಯಲ್ಲಿ ಕಾಡುವ ಡೆಂಘೀ ರೋಗ ನಿಧಾನವಾಗಿ ಹರಡಲಾರಂಭಿಸಿದೆ. 2017ರ ಜನವರಿಯಿಂದ ಜೂನ್‌ 22ರ ವರೆಗೆ ಒಟ್ಟು 35 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಮೂರ್‍ನಾಲ್ಕು ಚಿಕೂನ್‌ಗುನ್ಯಾ ರೋಗಗಳು ಪತ್ತೆಯಾಗಿದೆ. 

Advertisement

ಇದರೊಂದಿಗೆ ಮತ್ತೂಮ್ಮೆ ಡೆಂಘೀ ಭೂತ ಕಾಡಲಾರಂಭಿಸಿದೆ. ಅಚ್ಚರಿ ಎಂದರೆ ಈ ಬಾರಿ ನಗರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಭೂಪಾಲ ತೆಗನೂರು ಗ್ರಾಮದಲ್ಲಿ 2013-14ನೇ ಸಾಲನಲ್ಲಿ ಡೆಂಘೀಯಿಂದ ಇಡಿ ಊರು ಖಾಲಿಯಾಗಿತ್ತು.

ಒಂದೇ ಗ್ರಾಮದಲ್ಲಿ 19 ಜನರಿಗೆ ಸೋಂಕು ತಗುಲಿತ್ತು. ಐದಾರು ಜನ ಸಾವನ್ನಪ್ಪಿದ್ದರು. ಅಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಊರಿನ್ನೇ ಸ್ವಚ್ಚಗೊಳಿಸಿತ್ತು. ಆದಾಗ ಬಳಿಕ ಸ್ವಲ್ಪ ಡೆಂಘೀ ತಡೆಯುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ವಹಿಸಿದ್ದರು. ಅಲ್ಲದೆ, ಜಿಲ್ಲೆಯಲ್ಲಿ ಪ್ರಚಾರಾಂದೋಲನ ನಡೆದಿತ್ತು.

ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಫಾಗಿಂಗ್‌ ಯಂತ್ರಗಳನ್ನು ಕೂಡ ಖರೀದಿ ಮಾಡಿ ಕೊಡಲಾಗಿತ್ತು. ಆದರೆ, ಈಚೆಗೆ ಗ್ರಾಮ ಪಂಚಾಯಿತಿಯಲ್ಲಿ ಈ ಯಂತ್ರಗಳು ಕೆಲಸ ಮಾಡುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಬರುವ ಅನುದಾನವೂ ದುರ್ಬಳೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

204 ಜನರ ರಕ್ತ ಪರೀಕ್ಷೆ: ಜಿಲ್ಲೆಯಲ್ಲಿ ಡೆಂಘೀ ಸೋಂಕು ಪತ್ತೆಯಾಗಿರುವ ಪ್ರದೇಶ ಮತ್ತು ಊರುಗಳಲ್ಲಿನ ಒಟ್ಟು 204 ಜನರ ರಕ್ತದ ಮಾದರಿಯನ್ನು ಸಂಗ್ರಹ ಮಾಡಿ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಅತೀ ಹೆಚ್ಚು ಗುಲಬರ್ಗಾ ತಾಲೂಕು ಮತ್ತು ನಗರದ ಪ್ರದೇಶ ವ್ಯಾಪ್ತಿಯಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

Advertisement

ಮೇ ತಿಂಗಳಲ್ಲಿ 12, ಜೂನ್‌ 22ರವೆಗೆ ಅತಿ ಹೆಚ್ಚು ಅಂದರೆ 23 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಜೂನ್‌ ತಿಂಗಳಲ್ಲಿ ಮಳೆ ನೀರು ಸಂಗ್ರಹ ಹೆಚ್ಚಾಗುವುದರಿಂದ ಈಡೀಸ್‌ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಹೆಚ್ಚಾಗಿ ಬಾಲಕರು, ವೃದ್ಧರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿವೆ. 

ರೋಗದ ಭೀತಿ: ಮಳೆಗಾಲ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಘೀ ಹಾಗೂ ಮಲೇರಿಯಾ ಪ್ರಕರಣಗಳು ಭೀತಿ ಜನರಲ್ಲಿ ಶುರುವಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಹಿಂದೆ ಡೆಂಘೀ ಹಲವು ಜೀವಗಳನ್ನು ನುಂಗಿತ್ತು. ಅಲ್ಲದೆ, ಮಲೇರಿಯಾದಿಂದಲೂ ಮಕ್ಕಳು ಬಲಿಯಾಗಿರುವ ಕಹಿ ಘಟನೆಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ. 

ಆದ್ದರಿಂದ ಮಳೆಗಾಲ ಶುರುವಾದರೆ ಜನರು ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಜನರು ಆರೋಗ್ಯ ಇಲಾಖೆಯೊಂದಿಗೆ ಸತತ ಸಂಪರ್ಕ ಸಾಧಿಸುತ್ತಾರೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಇರದೇ ಇರುವುದು ಜನರ ಭಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಗಮನಿಸಿ ವ್ಯವಸ್ಥೆ ಸರಿ ಮಾಡಬೇಕಿದೆ. 

* ಸೂರ್ಯಕಾಂತ ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next