Advertisement

ಮಾಂಜ್ರಾ ನದಿಗೆ ನೀರು ಹರಿಸಲು ಆಗ್ರಹಿಸಿ ಧರಣಿ

11:59 AM Dec 01, 2018 | Team Udayavani |

ಬೀದರ: ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸುವುದು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಔರಾದ ತಾಲೂಕಿನ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರ ನಡೆಸಿದರು.

Advertisement

ನ.5ರಂದು ರೈತ ಸಂಘದ ಮನವಿಯಂತೆ ಕಾರಂಜಾದಿಂದ ಮಾಂಜ್ರಾ ನದಿಗೆ ನೀರು ಹರಿಸಲಾಗಿತ್ತು. ಈ ವರ್ಷ ಮಳೆ ಇಲ್ಲದ ಕಾರಣ ರೈತರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ನೀರು ಹರಿದುಬಂದ ಹಿನ್ನೆಲೆಯಲ್ಲಿ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಇದೀಗ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಇಂದಿಗೂ ಕೂಡ ಔರಾದ ತಾಲೂಕಿಗೆ ನೀರು ಬಂದಿಲ್ಲ. 

ಭಾಲ್ಕಿ ತಾಲೂಕಿಗೆ ಎರಡು ಬಾರಿ ನೀಡು ಬಿಡಲಾಗಿದೆ. ಔರಾದ ತಾಲೂಕಿಗೆ ಯಾಕೆ ನೀಡು ಬಿಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ಪ್ರಶ್ನಿಸಿದರು. ಭಾಲ್ಕಿ ಹಾಗೂ ಔರಾದ ತಾಲೂಕಿನ ಮಧ್ಯೆ ಯಾಕೆ ತಾರತಮ್ಯ ಮಾಡಲಾಗುತ್ತಿದೆ ಎಂದ ಆಕ್ರೋಷ ವ್ಯಕ್ತಪಡಿಸಿದರು.

ಸದ್ಯ ಮಾಂಜ್ರಾ ನದಿ ಸಂಪೂರ್ಣ ಬತ್ತಿಹೋಗಿದೆ. ಇಲ್ಲಿನ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕಾರಣ ಅತೀ ಶೀಘ್ರದಲ್ಲಿ ಕಾರಂಜಾ ಜಲಾಶಯದಿಂದ ನೀರು ಹರಿಸುವ ಕಾರ್ಯ ನಡೆಯಬೇಕು. ಇಲ್ಲವಾದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಸಿದರು. ರೈತ ಮುಖಂಡರಾದ ಶ್ರೀಮಂತ ಬಿರಾದರ, ಪ್ರಕಾಶ ಬಾವಗೆ, ಮಲ್ಲಯ್ನಾ ಸ್ವಾಮಿ, ಸತ್ಯವಾನ ಪಾಟೀಲ, ಬಾಬಶೆಟ್ಟಿ ಪಾಟೀಲ, ರಮೇಶ ಮೊರ್ಗೆ, ಅಶೋಕ ಬಿರಾದಾರ, ಗುಂಡಪ್ಪ ಬಿರಾದಾರ ಹಾಗೂ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next