Advertisement

ಗುಲ್ವಾಡಿ ಬೈಲ್ಮನೆ ಕೆರೆಗೆ ನೀರು ಹಾಯಿಸಲು ಬೇಡಿಕೆ

12:02 PM May 31, 2022 | Team Udayavani |

ಗುಲ್ವಾಡಿ: ‘ದೀಪದ ಬುಡದಲ್ಲಿ ಕತ್ತಲು’ ಎಂಬಂತೆ ಸೌಕೂರು ಏತ ನೀರಾವರಿ ಯೋಜನೆ ಆರಂಭಗೊಳ್ಳುವ ಗುಲ್ವಾಡಿಯಲ್ಲಿಯೇ ಕೃಷಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಇಲ್ಲಿನ ಬೈಲ್ಮನೆ ಕೆರೆಗೆ ನೀರು ಹಾಯಿಸಿದರೆ ಈ ಸಮಸ್ಯೆ ಪರಿಹಾರವಾಗಲಿದ್ದು, ಈ ಕುರಿತಂತೆ ಇಲ್ಲಿನ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದಾರೆ.

Advertisement

ಗುಲ್ವಾಡಿಯಲ್ಲಿ ವೆಂಟೆಂಡ್‌ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಬೈಲ್ಮನೆ ಕೆರೆ, ಗುಲ್ವಾಡಿಯ ಕೆಲವು ಭಾಗ, ಗುಡರಹಕ್ಲು ಭಾಗಗಳ ಕೃಷಿಗೆ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತಿದೆ. ಹಿಂದೆ ಈ ಸಮಸ್ಯೆ ಇರಲಿಲ್ಲ.

ನೀರು ಹಾಯಿಸಿದರೆ ಅನುಕೂಲ

ಗುಲ್ವಾಡಿಯಲ್ಲಿರುವ ಬೆಲ್ಮನೆ ಕೆರೆಯು ವಿಶಾಲವಾಗಿದ್ದು, ಬೇಸಗೆಯಲ್ಲಿಯೂ ಈ ಕೆರೆಯಲ್ಲಿ ನೀರಿದ್ದರೂ, ಉಪ್ಪಿನ ಅಂಶ ಇರುತ್ತದೆ. ಇದನ್ನು ಕೃಷಿಗೆ ಬಳಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಈಗಿನ ಸೌಕೂರು ಏತ ನೀರಾವರಿ ಯೋಜನೆಯಡಿ ಹತ್ತಾರು ಗ್ರಾಮಗಳು, ದೂರದ ಬೇರೆ ಬೇರೆ ಊರುಗಳಿಗೆ ನೀರು ಕೊಂಡೊಯ್ಯಲಾಗುತ್ತಿದ್ದು, ಆದರೆ ಇಲ್ಲೇ ಇರುವ ಈ ಕೆರೆಗೆ ನೀರು ಹಾಯಿಸಿ ದರೆ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಇಲ್ಲಿನ ರೈತರ ಬೇಡಿಕೆಯಾಗಿದೆ.

25 ಎಕರೆಗೆ ವರದಾನ

Advertisement

ಇದರಿಂದಾಗಿ ಇಲ್ಲಿನ ಸುಮಾರು 20-25 ಮಂದಿಯ ಸುಮಾರು 25 ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತದ ಕೃಷಿಗೆ ತೊಡಕಾಗಿದೆ. ಕೆಲವರಂತೂ ಇಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇನ್ನು ಕೃಷಿಗೆ ಮಾತ್ರವಲ್ಲ, ಬೇಸಗೆಯಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆಯೂ ಇದ್ದು, ಈ ಕೆರೆಗೆ ನೀರು ಹಾಯಿಸಿದರೆ, ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಬಾವಿಯ ಅಂತರ್ಜಲ ಮಟ್ಟವೂ ಸುಧಾರಿಸಲಿದೆ.

ಮನವಿ ಸಲ್ಲಿಕೆ

ಅಲ್ಲಿನ ಗ್ರಾಮಸ್ಥರು ಈ ಕುರಿತಂತೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರೆ, ಖಂಡಿತವಾಗಿಯೂ ಈ ಬಗ್ಗೆ ಸಂಬಂಧಪಟ್ಟ ವಾರಾಹಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. – ಸುಧೀಶ್‌ ಶೆಟ್ಟಿ, ಅಧ್ಯಕ್ಷರು, ಗುಲ್ವಾಡಿ ಗ್ರಾ.ಪಂ.

ಪರಿಶೀಲನೆ

ಗುಲ್ವಾಡಿಯಲ್ಲಿ ಈಗಾಗಲೇ ಒಂದೆರಡು ಕಡೆಗಳಲ್ಲಿ ಸೌಕೂರು ಏತ ನೀರಾವರಿ ಯೋಜನೆಯ ನೀರನ್ನು ಹಾಯಿಸಲು ಕ್ರಮಕೈಗೊಳ್ಳಲಾಗಿದೆ. ಬೈಲ್ಮನೆ ಕೆರೆಗೆ ನೀರು ಹಾಯಿಸುವ ಸಂಬಂಧ ಅಲ್ಲಿಗೆ ಭೇಟಿ, ನೀಡಿ ಪರಿಶೀಲಿಸಲಾಗುವುದು. – ಪ್ರಸನ್ನ ಶೇಟ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ವಾರಾಹಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next