Advertisement

ಭಗವಾನ್‌ಗೆ ನೀಡಿದ ಭದ್ರತೆ ಹಿಂಪಡೆಯಲು ಆಗ್ರಹ

11:32 AM Jan 04, 2019 | Team Udayavani |

ಭದ್ರಾವತಿ: ಹಿಂದೂ ಧರ್ಮೀಯರ ಆರಾಧ್ಯ ದೈವ ಶ್ರೀರಾಮ- ಸೀತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ
ಭಗವಾನ್‌ಗೆ ನೀಡಿರುವ ಭದ್ರತೆಯನ್ನು ಸರ್ಕಾರ ಹಿಂಪಡೆದು ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್‌ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ ಹೇಳಿದರು.

Advertisement

ಹಿಂದೂ ಧರ್ಮದ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಭಗವಾನ್‌ ವಿರುದ್ಧ ಗುರುವಾರ ವಿಶ್ವಹಿಂದೂ ಪರಿಷತ್‌ ತಾಲೂಕು ಶಾಖೆ ಮತ್ತು ಹಿಂದೂ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ತಾಲೂಕು ಕಚೇರಿ ಮುಂದೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
 
 ಭಗವಾನ್‌ ಎಂದು ಹೆಸರಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ಹಿಂದೂ ಧರ್ಮೀಯರ ದೇವರಾದ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್‌ ಬಲವಾಗಿ ಖಂಡಿಸುತ್ತದೆ. ಇಂತಹ ವ್ಯಕ್ತಿಯ ಬೇಜವಾಬ್ದಾರಿ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ಅಸಹನೆ ಹೆಚ್ಚುತ್ತದೆ.

ಈತನ ಮಾತುಗಳಿಂದ ಅಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ವಿಕೃತ ಮನಸ್ಸಿನ ಭಗವಾನ್‌ಗೆ ಸರ್ಕಾರ ರಕ್ಷಣೆಗಾಗಿ ಮಾಡಿರುವ ಖರ್ಚನ್ನು ಆತನಿಂದ ವಸೂಲಿ ಮಾಡಬೇಕು. ಈ ರೀತಿ ಹಿಂದೂ ಧರ್ಮದ ದೇವರ ಬಗ್ಗೆ ಅಸಡ್ಡೆಯಾಗಿ ಮಾತನಾಡುವವರ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಪರಿಷತ್‌ ಮುಖಂಡ ಓಂಕಾರಪ್ಪ ಮಾತನಾಡಿ, ಹಿಂದೂ ರಾಷ್ಟ್ರ ರಾಮನ ಪರಮ ಪವಿತ್ರ ಭೂಮಿ. ಇಂತಹ ನೆಲದಲ್ಲಿ ನಿಂತು ರಾಮನ ಬಗ್ಗೆ ವಿಕೃತವಾಗಿ ಮಾತನಾಡುವ ಭಗವಾನ್‌ನಂತಹ ವಿಕೃತ ಸ್ವಭಾವದ ವ್ಯಕ್ತಿಗಳು ದೇಶದ ಶಾಂತಿ- ಸುವ್ಯವಸ್ಥೆಗೆ ಮಾರಕ. ಅಂತಹ ವ್ಯಕಿಗಳ ಸಂಸ್ಥೆಗಳ ಬಗ್ಗೆ ಪ್ರತಿಯೊಬ್ಬ ಹಿಂದೂ ಸೆಟೆದು ನಿಂತಿ ಪ್ರತಿಭಟಿಸುವುದು ಪರಮ ಕರ್ತವ್ಯ ಎಂದರು.
 
ಸಭೆಯಲ್ಲಿ ಮುಖಂಡರಾದ ಧರ್ಮಪ್ರಸಾದ್‌, ಬಿ.ಕೆ. ಶ್ರೀನಾಥ್‌, ರಾಮಚಂದ್ರ, ಆರ್‌.ಎಸ್‌. ಶೋಭ, ಹೇಮಾವತಿ, ವಿಶ್ವನಾಥ ರಾವ್‌, ಸುನೀಲ, ಸೋಮಯಾಜಿ, ಕಾ.ರ. ನಾಗರಾಜ್‌ ಮುಂತಾವದವರು ಭಾಗವಹಿಸಿ ಮಾತನಾಡಿದರು. ರಂಗಪ್ಪ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next