Advertisement

ನರೇಗಾ ಕಾಯಕೋತ್ಸವಕ್ಕೆ ಹೆಚ್ಚುತ್ತಿದೆ ಬೇಡಿಕೆ

07:14 PM Feb 13, 2021 | Team Udayavani |

ಹುಬ್ಬಳ್ಳಿ: ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಮಹಿಳಾ ಕಾರ್ಮಿಕರನ್ನು ಹೆಚ್ಚಿಸಲು ಸರಕಾರ ಜಾರಿಗೆ ತಂದಿರುವ “ಮಹಿಳಾ ಕಾಯಕೋತ್ಸವ’ ಅನುಷ್ಠಾನ ನಿಟ್ಟಿನಲ್ಲಿಮೊದಲ ಹಂತದಲ್ಲಿ ನಾಲ್ಕು ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದ್ದು, ಜಾಗೃತಿ, ಪ್ರಚಾರ ಹಾಗೂ ಸರ್ವೇ ಆರಂಭಿಸಲಾಗಿದೆ.

Advertisement

ಹಳ್ಯಾಳ, ಬೆಳಗಲಿ, ಬು.ಅರಳಿಕಟ್ಟಿ ಹಾಗೂ ಕೋಳಿವಾಡ ಗ್ರಾಪಂಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.ಈ ಗ್ರಾಪಂಗಳಲ್ಲಿ ಮನೆ ಮನೆ ಸರ್ವೇಮಾಡುವ ಮೂಲಕ ಮಹಿಳೆಯರಿಗೆ ತಾವುಇರುವ ಊರಿನಲ್ಲಿ ಉದ್ಯೋಗ ಲಭ್ಯತೆ ಕುರಿತುಜಾಗೃತಿ ಹಾಗೂ ಅದರ ಲಾಭಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮನವರಿಕೆ ಮಾಡುತ್ತಿದ್ದಾರೆ.

ಹಳ್ಯಾಳ, ಬು.ಅರಳಿಕಟ್ಟಿ, ಕೋಳಿವಾಡ ಹಾಗೂ ಬೆಳಗಲಿ ಗ್ರಾಪಂ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 2580 ಕುಟುಂಬಗಳ ಸರ್ವೇಮಾಡಲಾಗಿದ್ದು, ಇದರಲ್ಲಿ ಬೆಳಗಲಿ ಗ್ರಾಪಂವ್ಯಾಪ್ತಿಯಲ್ಲಿ ಉದ್ಯೋಗ ಕಾರ್ಡ್‌ ಪಡೆಯಲು 462 ಮಹಿಳೆಯರು, ಬು.ಅರಳಿಕಟ್ಟಿ199, ಕೋಳಿವಾಡ 150 ಹಾಗೂ ಹಳ್ಯಾಳ ಗ್ರಾಪಂನಲ್ಲಿ 68 ಜನ ಮಹಿಳೆಯರು ಜಾಬ್‌ ಕಾರ್ಡ ಪಡೆಯಲು ಮುಂದೆ ಬಂದಿದ್ದಾರೆ. ಈಗಾಗಲೇ 2418 ಮಹಿಳೆಯರು ಜಾಬ್‌ ಕಾರ್ಡ್‌ ಹೊಂದಿದ್ದಾರೆ.

ಆರಂಭದಲ್ಲಿ ಶೇ.40: ಗ್ರಾಮೀಣ ಭಾಗದಲ್ಲಿ ಮಹಿಳಾ ಕಾರ್ಮಿಕರುಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತೊಡಗಿಕೊಳ್ಳಬೇಕು, ಸ್ವಾವಲಂಬಿಗಳಾಗಬೇಕೆನ್ನುವ ದೃಷ್ಟಿಯಿಂದಮಹಿಳಾ ಕಾಯಕೋತ್ಸವ ಜಾರಿಗೆ ತರಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ವೇತನ ಸಹ ಜಾರಿ ಮಾಡಲಾಗಿದೆ.ಆರಂಭದಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿಮಹಿಳಾ ಕಾರ್ಮಿಕರ ಸಂಖ್ಯೆ ಶೇ.40ರಷ್ಟಿತ್ತು. ಆದರೆ ಮಹಿಳಾ ಕಾಯಕೋತ್ಸವ ಜಾಗೃತಿಕಾರ್ಯಕ್ರಮ ಮಾಡಿದ ನಂತರ ಹಂತ ಹಂತವಾಗಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದು, ಯೋಜನೆಗೆ ಪೂರಕ ಸ್ಪಂದನೆ ದೊರೆಯುತ್ತಿದೆ.

ಪ್ರಯಾಣ ಭತ್ಯೆ: ಉದ್ಯೋಗ ಅರಸಿ ಬರುವ ಮಹಿಳೆಯರಿಗೆ ಹಾಗೂ ಪುರುಷರಿಗೆ 5 ಕಿಮೀಗಿಂತ ಹೆಚ್ಚಿನ ದೂರ ಇದ್ದಲ್ಲಿ ಪ್ರಯಾಣ ಭತ್ಯೆ ಸಹ ನೀಡಲಾಗುತ್ತದೆ. ಒಂದು ವಾರದಲ್ಲಿ ಎಷ್ಟು ಜನ ಕೆಲಸ ಮಾಡಲಿದ್ದಾರೆ ಎಂದುಹೆಸರುಗಳನ್ನು ನಮೂದಿಸಿ ಎನ್‌ಎಂಆರ್‌ ಸಿದ್ಧಪಡಿಸಬೇಕು.

Advertisement

ಇದಾದ ಒಂದು ವಾರಗಳ ಕಾಲ ಮತ್ತೆ ಎನ್‌ಎಂಆರ್‌ ಸಿದ್ಧಪಡಿಸಲು ಬರುವುದಿಲ್ಲ.ಆದರೆ ಕೆಲ ಗ್ರಾಮೀಣ ಭಾಗದಲ್ಲಿ ಮಹಿಳೆಯರುಕೆಲಸ ನಡೆಯುವ ಸ್ಥಳಗಳಿಗೆ ಆಗಮಿಸಿ ನಮಗೂ ಕೆಲಸ ಬೇಕು ಎನ್ನುವವರ ಸಂಖ್ಯೆ ಹೆಚ್ಚತೊಡಗಿದೆ.

ಮಹಿಳಾಸ್ನೇಹಿ ವ್ಯವಸ್ಥೆ  :

ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗದತ್ತತೊಡಗಿಸಬೇಕು ಎನ್ನುವ ದೃಷ್ಟಿಯಿಂದಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅವರಮಕ್ಕಳನ್ನು ನೋಡಿಕೊಳ್ಳಲು ಆಯಾ ವ್ಯವಸ್ಥೆ,ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಹಿಳೆಯರ 25 ಜನರ ಒಂದು ತಂಡ ಮಾಡಿ ಅವರಲ್ಲೊಬ್ಬರನ್ನು “ಕಾಯಕ ಬಂಧು’ ಎಂದು ನೇಮಕ ಮಾಡಿ ಅವರಿಗೆ ಉಸ್ತುವಾರಿ ನೀಡಲಾಗುತ್ತದೆ. ಪ್ರತಿ ಮಾನವ ದಿನಕ್ಕೆ ಕಾಯಕ ಬಂಧು ಮಹಿಳೆಗೆ 5 ರೂ. ಹಾಗೂ ಪುರುಷನಿಗೆ 4 ರೂ. ಹೆಚ್ಚುವರಿ ಹಣ ನೀಡಲಾಗುತ್ತದೆ.

ಕೆಲಸ ಬೇಕಾದರೆ ಗ್ರಾಪಂ ಸಂಪರ್ಕಿಸಿ:  ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಮಹಿಳೆಯರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾಯಕೋತ್ಸವ ಯೋಜನೆ ಜಾರಿಗೆ ತರಲಾಗಿದೆ.ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲೆಡೆ ಪ್ರಚಾರಹಾಗೂ ಸರ್ವೇ ಕಾರ್ಯ ಜಾರಿಯಲ್ಲಿದ್ದು, ಅಷ್ಟಾಗಿಯೋ ಜನರಿಗೆ ಕೆಲಸ ಸಿಗದೇಇದ್ದಲ್ಲಿ ಅವರು ನೇರವಾಗಿ ಗ್ರಾಪಂಗೆ ತೆರಳಿ ಉದ್ಯೋಗ ಬೇಕು ಎಂದು ಬೇಡಿಕೆ ಸಲ್ಲಿಸಿದಲ್ಲಿ 15 ದಿನದೊಳಗೆ ಅವರಿಗೆ ಕಾಯಕೋತ್ಸವ ಯೋಜನೆಯಡಿ ಉದ್ಯೋಗ ನೀಡಲಾಗುತ್ತದೆ.

ಮಹಿಳಾ ಕಾಯಕೋತ್ಸವ ಯೋಜನೆಯಡಿ ಸ್ವಂತ ಊರಿನಲ್ಲಿಯೇ ಕೆಲಸ ಮಾಡಿ ಕೂಲಿಪಡೆಯಬಹುದು. ಇದಲ್ಲದೇ ಉದ್ಯೋಗಕ್ಕೆ ಆಗಮಿಸುವ ಮಹಿಳೆಯರಿಗೆ ಮಹಿಳಾ ಸ್ನೇಹಿ ವ್ಯವಸ್ಥೆ ಕಲ್ಪಿಸಲಾಗುವುದು. ಮೊದಲನೇ ಹಂತದಲ್ಲಿ ನಾಲ್ಕು ಗ್ರಾಪಂಗಳು 2ನೇ ಹಂತದಲ್ಲಿ 6 ಗ್ರಾಪಂಗಳನ್ನು ತೆಗೆದುಕೊಳ್ಳಲಾಗುವುದು. –ಗಂಗಾಧರ ಕಂದಕೂರ, ತಾಪಂ ಇಒ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next