Advertisement

ಬೇಜವಾಬ್ದಾರಿ ಅಧಿಕಾರಿಗಳವಿರುದ್ಧ ಕ್ರಮಕ್ಕೆ ಆಗ್ರಹ

03:52 PM Jan 01, 2018 | Team Udayavani |

ಕೆಂಭಾವಿ: ಪುರಸಭೆ ಸಿಬ್ಬಂದಿ ನಾಗರಿಕರಿಗೆ ಸಂಬಂಧಪಟ್ಟ ಮನೆ ವರ್ಗಾವಣೆ, ಖಾತಾ ನಕಲು, ಕಟ್ಟಡ ಪರ್ಮಿಶನ್‌ಗಳನ್ನು ನಿಗದಿತ ಸಮಯದೊಳಗೆ ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿ ಕೆಂಭಾವಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಮನವಿ ಸಲ್ಲಿಸಿ ಮಾತನಾಡಿದ ಯುವ ಮುಖಂಡ ಚಾಂದ ಪಾಶಾ, ಅಧಿಕಾರಿಗಳಿಗೆ ಯಾವ ಯಾವ ದಾಖಲಾತಿಗಳನ್ನು ಯಾವ ನಿಗದಿತ ಸಮಯದೊಳಗೆ ನೀಡಬೇಕು ಎಂಬ ಅರಿವಿಲ್ಲ. ಈ ಕುರಿತಂತೆ ನೋಟಿಸ್‌ ಬೋರ್ಡ್‌ ಮೇಲೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ದೂರಿದ್ದಾರೆ.

ಪುರಸಭೆ ಕಾರ್ಯಾಲಯಕ್ಕೆ ಶೀಘ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹನುಮಯ್ಯ ಗುತ್ತೇದಾರ, ಸೋಮನಾಥ ಬಡಿಗೇರ, ಕೃಷ್ಣಪ್ಪ ತಳವಾರ, ನರಸಿಂಗಪ್ಪ ಗೌಡೂರ, ಸಚಿನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next